ಮುಂಬೈ: ಆರ್ಯನ್ ಖಾನ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಸಾಕ್ಷಿ ಕಿರಣ್ ಗೋಸಾವಿಯನ್ನು ಪುಣೆಯಲ್ಲಿ ಬಂಧಿಸಲಾಗಿದೆ.
ಆರ್ಯನ್ ಖಾನ್ ಜೊತೆ ವೈರಲ್ ಸೆಲ್ಫಿ ತೆಗೆದುಕೊಂಡಿದ್ದ ಗೋಸಾವಿ ವಿರುದ್ಧ ಪುಣೆ ಪೊಲೀಸರು ಸುತ್ತೋಲೆ ಹೊರಡಿಸಿದ್ದರು.ಗೋಸಾವಿ ಮತ್ತು ಮನೀಶ್ ಭಾನುಶಾಲಿ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಎನ್ಸಿಪಿ ನಾಯಕ ನವಾಬ್ ಮಲಿಕ್ ಹೇಳಿದ್ದರು.
ಆದಾಗ್ಯೂ 2018 ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲುಕ್ಔಟ್ ಸುತ್ತೋಲೆ ಹೊರಡಿಸಿದ್ದಾರೆ.
“2018 ರ ವಂಚನೆ ಪ್ರಕರಣದಲ್ಲಿ ತನ್ನ ವಿರುದ್ಧ ಫರಾಸ್ಖಾನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕೆ.ಪಿ.ಗೋಸಾವಿ ವಿರುದ್ಧ ನಾವು ಲುಕ್ಔಟ್ ಸುತ್ತೋಲೆ ನೋಟಿಸ್ ಜಾರಿಗೊಳಿಸಿದ್ದೇವೆ” ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತಾಬ್ ಗುಪ್ತಾ ಹೇಳಿದ್ದಾರೆ.
ಡ್ರಗ್ಸ್ ವಶಪಡಿಸಿಕೊಂಡ ನಂತರ ಕ್ರೂಸ್ ಹಡಗು ದಾಳಿಯ ಭಾಗವಾಗಿದ್ದ ಒಂಬತ್ತು ಸ್ವತಂತ್ರ ಸಾಕ್ಷಿಗಳಲ್ಲಿ ಅವರು ಒಬ್ಬರು.