News Karnataka Kannada
Saturday, April 27 2024
ಮಧ್ಯ ಪ್ರದೇಶ

ಅಯೋಧ್ಯೆಗೆ ಕರೆದೊಯ್ದ ಪತಿಗೆ ಡೈವೋರ್ಸ್‌ ನೀಡಲು ಮುಂದಾದ ಪತ್ನಿ

New Project 2024 01 26t111620.246
Photo Credit : News Kannada

ಭೋಪಾಲ್: ಅಯೋಧ್ಯೆ ಮತ್ತಿತರ ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ದ ಗಂಡನಿಗೆ ವಿಚ್ಚೇದನ ನೀಡಲು ಮುಂದಾದ ಪ್ರಸಂಗ ನಡೆದಿದೆ. ವಿವಾಹವಾಗಿ ಕೇವಲ ಎಂಟು ತಿಂಗಳು ಕಳೆದಿರುವ ದಂಪತಿಯ ವಿಚ್ಛೇದನದ ಅರ್ಜಿಯು ಕೌನ್ಸೆಲಿಂಗ್ ಹಂತದಲ್ಲಿ ಬಾಕಿ ಉಳಿದಿದ್ದು, ಮಹಿಳೆ ಮತ್ತು ಆಕೆಯ ಪತಿ ನಡುವೆ ಸೌಹಾರ್ದಯುತ ಪರಿಹಾರಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಕೌಟುಂಬಿಕ ನ್ಯಾಯಾಲಯದ ವಿವಾಹ ಸಲಹೆಗಾರ ಶೈಲ್ ಅವಸ್ತಿ ಪಿಟಿಐಗೆ ತಿಳಿಸಿದರು.

ದಂಪತಿ ಕಳೆದ ವರ್ಷ ಮೇ 3 ರಂದು ವಿವಾಹವಾಗಿದ್ದರು. ವಿದೇಶಕ್ಕೆ ಹನಿಮೂನ್ ಹೋಗುವಂತೆ ಮಹಿಳೆ ಹಠ ಹಿಡಿದಿದ್ದಾಳೆ. ಪತಿ ಐಟಿ ವೃತ್ತಿಪರರಾಗಿದ್ದರೆ, ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.

ಹೆಂಡತಿಗೆ ತಿಳಿಸದೆ ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಟಿಕೆಟ್‍ಗಳನ್ನು ಕಾಯ್ದಿರಿಸಿದ್ದಾನೆ ಮತ್ತು ಹೊರಡುವ ಒಂದು ದಿನದ ಮೊದಲು ಪ್ರವಾಸದ ಬಗ್ಗೆ ತಿಳಿಸಿದ್ದ ನೆ.

ರಾಮ ಮಂದಿರದ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ತನ್ನ ತಾಯಿ ಅಯೋಧ್ಯೆಗೆ ಭೇಟಿ ನೀಡಲು ಬಯಸಿರುವುದಾಗಿ ಪತ್ನಿಗೆ ತಿಳಿಸಿದರು. ಆ ಸಮಯದಲ್ಲಿ ಮಹಿಳೆ ಆಕ್ಷೇಪಿಸಲಿಲ್ಲ ಆದರೆ ಕುಟುಂಬವು ಹಿಂತಿರುಗಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಅದರ   ಜಗಳ  ಆಗಿದೆ. ಮಹಿಳೆ ತನ್ನ ಹೇಳಿಕೆಯಲ್ಲಿ ಪುರುಷನು ತನ್ನ ಹೆತ್ತವರನ್ನು ತನಗಿಂತ ಹೆಚ್ಚು ಕಾಳಜಿ ವಹಿಸಿದ್ದಾನೆ ಎಂದು ಮುನಿಸಿಕೊಂಡು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು