ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ನಡೆದಿದೆ. ಬಿಜೆಪಿ ದಿಗ್ಗಜರಾದ ಕೈಲಾಶ್ ವಿಜಯವರ್ಗಿಯಾ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಸೋಮವಾರ ಮಧ್ಯಪ್ರದೇಶದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯ ಪ್ರದೇಶದ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ಇಂದು (ಸೋಮವಾರ) ಆರು ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು ನಾಲ್ವರು ರಾಜ್ಯ ಸಚಿವರು ಸೇರಿದಂತೆ 28 ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ವಿಜಯವರ್ಗಿಯಾ ಮತ್ತು ಪಟೇಲ್ ಅವರ ಜತೆಗೆ, ರಾಕೇಶ್ ಸಿಂಗ್, ರಾವ್ ಉದಯ್ ಪ್ರತಾಪ್ ಸಿಂಗ್, ಕರಣ್ ಸಿಂಗ್ ವರ್ಮಾ, ನಾಗರ್ ಸಿಂಗ್ ಚೌಹಾಣ್, ಸಮಪತಿಯ ಉಯಿಕೆ, ಈಡಾಲ್ ಸಿಂಗ್ ಕಂಸಾನಾ, ಪ್ರದ್ಯುಮನ್ ಸಿಂಗ್ ತೋಮರ್, ಇಂದರ್ ಸಿಂಗ್ ಪರ್ಮಾರ್, ನಿರ್ಮಲಾ ಭೂರಿಯಾ, ತುಳಸಿ ಸಿಲಾವತ್, ವಿಜಯ್ ಶಾ, ವಿಶ್ವಾಸ್ ಸಾರಂಗ್, ಗೋವಿಂದ್ ಸಿಂಗ್ ರಜಪೂತ್, ನಾರಾಯಣ ಸಿಂಗ್ ಕುಶ್ವಾಹ, ರಾಕೇಶ್ ಶುಕ್ಲಾ ಮತ್ತು ಚೇತನ್ ಕಶ್ಯಪ್ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕೃಷ್ಣ ಗೌರ್, ಧರ್ಮೇಂದ್ರ ಲೋಧಿ, ದಿಲೀಪ್ ಜೈಸ್ವಾಲ್, ಗೌತಮ್ ಟೆಟ್ವಾಲ್, ಲಖನ್ ಪಟೇಲ್ ಮತ್ತು ನಾರಾಯಣ ಪನ್ವಾರ್ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಪ್ರಮಾಣ ವಚನ ಸ್ವೀಕರಿಸಿದರು. ಅದೇ ವೇಳೆ ರಾಧಾ ಸಿಂಗ್, ಪ್ರತಿಮಾ ಬಗ್ರಿ, ದಿಲೀಪ್ ಅಹಿರ್ವಾರ್ ಮತ್ತು ನರೇಂದ್ರ ಶಿವಾಜಿ ಪಟೇಲ್ ಅವರು ರಾಜ್ಯಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.