News Karnataka Kannada
Tuesday, May 07 2024
ಮಧ್ಯ ಪ್ರದೇಶ

ಉಕ್ರೇನ್‌ ಬಿಕ್ಕಟ್ಟನ್ನು ಅಸ್ತ್ರವನ್ನಾಗಿಸಿಕೊಂಡು ಮಹಿಳೆಗೆ ವಂಚನೆ

Fraud
Photo Credit :

ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ತಮ್ಮವರ ರಕ್ಷಣೆಗೆ ಕುಟುಂಬದವರು ಪರಿತಪಿಸುತ್ತಿರುವಾಗ ಈ ಸಂದರ್ಭ ಬಳಸಿ ವಂಚಕರು ಗಾಳಹಾಕಿ ಹಣ ದೋಚಿರುವ ಬೆಚ್ಚಿಬೀಳಿಸುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ.

ಲ್ಯಾಬ್ ಅಸಿಸ್ಟೆಂಟ್ ಆಗಿರುವ ವೈಶಾಲಿ ವಿಲ್ಸನ್ ಅವರ ಮಗಳು ಸೃಷ್ಟಿ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಮಗಳ ರಕ್ಷಣೆಗಾಗಿ ಆಕೆ ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳೊಂದಿಗೆ ಮನವಿ ಮಾಡಿದ್ದಾರೆ. ಆಕೆಯ ಪರಿಸ್ಥಿತಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ದುಷ್ಕರ್ಮಿ ಪ್ರಿನ್ಸ್ ಎಂದು ಕರೆಸಿಕೊಂಡ ವ್ಯಕ್ತಿ ತಾನು ಪಿಎಂಒ ಕಚೇರಿಯಲ್ಲಿ ಕೆಲಸ ಮಾಡುವುದಾಗಿ ಪರಿಚಯಿಸಿಕೊಂಡು ತಮ್ಮ ಮಗಳಿಗೆ ನೆರವಾಗುವುದಾಗಿ 42,000 ರೂ.ಗಳನ್ನು ಬ್ಯಾಂಕ್‌ಗೆ ವರ್ಗಾಯಿಸುವಂತೆ ಹೇಳಿದ್ದಾನೆ.

ವಿಮಾನದ ಟಿಕೆಟ್‌ಗಾಗಿ ಎಂದು ಹಣ ಕೇಳಿದ್ದು, ತಾಯಿಯು ಅನುಮಾನ ಮಾಡದೇ ತಕ್ಷಣ ಹಣ ಕಳುಹಿಸಿದ್ದಾರೆ. ಆದರೆ ಆತನಿಂದ ಪ್ರತಿಕ್ರಿಯೆ ಸಿಗದಿದ್ದಾಗ ಆ ತಾಯಿ ಗಾಬರಿಯಾಗಿದ್ದಾರೆ.

ಅವರು ನೀಡಿದ ಸಂಖ್ಯೆಗೆ ಹಲವಾರು ಬಾರಿ ಕರೆ ಮಾಡಿದ್ದೇನೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರು ನನ್ನ ಖಾತೆಗೆ 5,000 ರೂ. ಮತ್ತು ನಕಲಿ ರಸೀದಿಗಳನ್ನು ಕಳುಹಿಸಿದ್ದಾನೆ ಎಂದು ವೈಶಾಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಳಿಕ ಆಕೆ ಕೆಲವು ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಪಿಎಂಒದಲ್ಲಿ ಅಂತಹ ವ್ಯಕ್ತಿ ಇಲ್ಲ ಎಂದು ಅವರು ಹೇಳಿದರು. ನಂತರ ಪೊಲೀಸರಿಗೆ ದೂರು ನೀಡಿದರು.

ದೆಹಲಿಯಲ್ಲಿ ಪ್ರಿನ್ಸ್ ಇರುವ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿದ್ದು, ಎಫ್‌ಐಆರ್ ದಾಖಲಾಗಿದ್ದು, ಆತನ ಪತ್ತೆಗೆ ತಂಡಗಳನ್ನು ಕಳುಹಿಸಲಾಗಿದೆ ಎಂದು ಎಸ್‌ಪಿ ಮೋನಿಕಾ ಶುಕ್ಲಾ ತಿಳಿಸಿದ್ದಾರೆ. ನಾವು ಆತನ ಬ್ಯಾಂಕ್ ಖಾತೆ ಸೀಜ್ ಮಾಡಿದ್ದೇವೆ‌. ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರೋಗ್ಯ ಸಚಿವ ಪ್ರಭುರಾಮ್ ಚೌಧರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ವೈಶಾಲಿಯವರಿಗೆ ಕರೆ ಮಾಡಿ, ಸೃಷ್ಟಿಯನ್ನು ಮನೆಗೆ ಕರೆತರಲು ಎಲ್ಲಾ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು