ತಿರುವನಂತಪುರಂ: ಕೇರಳದ ತ್ರಿಶೂರ್ ನಲ್ಲಿ ಪತಿಯನ್ನು ಕೊಲೆ ಮಾಡಿದ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ತ್ರಿಶೂರ್ ಜಿಲ್ಲೆಯ ವರಂತಪಲ್ಲಿ ಮೂಲದ ನಿಶಾ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಮೃತ ವಿನೋದ್ ತನ್ನ ಹೆಂಡತಿಯ ಚಾರಿತ್ರ್ಯದ ಬಗ್ಗೆ ಅನುಮಾನ ಹೊಂದಿದ್ದನು ಮತ್ತು ನಿಯಮಿತವಾಗಿ ಜಗಳಗಳು ನಡೆಯುತ್ತಿದ್ದವು. ಜುಲೈ 11 ರಂದು ವಿನೋದ್ ನಿಶಾಗೆ ಮೊಬೈಲ್ ನಲ್ಲಿ ಕರೆ ಮಾಡಿದಾಗ, ಆಕೆ ಫೋನ್ ಎತ್ತದ ಕಾರಣ ಇದರಿಂದ ಕೋಪಗೊಂಡ ವಿನೋದ್ ಮನೆಗೆ ಬಂದು ನಿಶಾ ಜೊತೆ ಜಗಳವಾಡಿದ್ದಾನೆ. ವಿನೋದ್ ನಿಶಾಳ ತೋಳನ್ನು ತಿರುಚಿದ್ದಾನೆ ಇದರಿಂದ ಸಿಟ್ಟಿಗೆದ್ದ ನಿಶಾ ತಕ್ಷಣ ಅಡುಗೆ ಮನೆಯಿಂದ ಚಾಕು ತೆಗೆದುಕೊಂಡು ವಿನೋದ್ ಎದೆಗೆ ಮೂರು ಬಾರಿ ಇರಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನೋದ್ ತತ್ ಕ್ಷಣ ಸಾವನಪ್ಪಿದ್ದಾನೆ.