ತಿರುವನಂತಪುರ: ಉತ್ತರ ಕೇರಳದ ಕರಾವಳಿ ಅರಣ್ಯದಿಂದ ವಿಜ್ಞಾನಿಗಳು ನೆಲದಲ್ಲಿ ವಾಸಿಸುವ ಹಿಂಬದಿಯ ಕಾಲು ಮುದುರಿಕೊಂಡಿರುವ ಹೊಸ ಜಾತಿಯ ಹಲ್ಲಿಯ ಪ್ರಬೇಧವನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಯ ಮಧ್ಯಭಾಗದ ಚೆಂಗೋಡುಮಲ ಗುಡ್ಡದಲ್ಲಿ ಈ ಹಲ್ಲಿ ಪತ್ತೆಯಾಗಿದೆ.
ವೈಜ್ಞಾನಿಕವಾಗಿ ಸಿರ್ಟೊಡಾಕ್ಟಿಲಸ್ (ಗೆಕೊಯೆಲ್ಲಾ) ಚೆಂಗೋಡುಮಾಲೆನ್ಸಿಸ್ ಒಂದು ಸಣ್ಣ ಹಲ್ಲಿಯಾಗಿದ್ದು, ರಾತ್ರಿ ವೇಳೆ ಚುಟವಟಿಕೆಯಿಂದ ಕೂಡಿರುತ್ತದೆ. ಇದು ಎಲೆಗಳ ಕಸ ಮತ್ತು ಕಾಡುಗಳಲ್ಲಿನ ಬಂಡೆಗಳ ನಡುವೆ ನೆಲದ ಮೇಲೆ ಕಂಡುಬರುತ್ತದೆ. ಕೆಲಭಾಗಗಳಲ್ಲಿ ತೋಟಗಳಲ್ಲಿಯೂ ಈ ಹಲ್ಲಿ ಪತ್ತೆಯಾಗಿದೆ.
ಚೆಂಗೋಡುಮಲ ಮತ್ತು ಉತ್ತರ ಕೇರಳದ ಕರಾವಳಿ ಅರಣ್ಯ, ಕೋಝಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳ ಅರಣ್ಯಗಳಲ್ಲಿ ಈ ಹಲ್ಲಿ ಪ್ರಬೇಧ ಪತ್ತೆಯಾಗಿದೆ.
ಅಕ್ರಮ ಗಣಿಗಾರಿಕೆ ಮತ್ತು ವಿವೇಚನಾರಹಿತ ಮಾನವ ಅತಿಕ್ರಮಣದಿಂದ ಈ ಹಲ್ಲಿ ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿ, ಸರಿಸೃಪಗಳು ಅಪಾಯದಲ್ಲಿವೆ. ಹೊಸ ಜಾತಿಯ ಹಲ್ಲಿಯ ಕುರಿತು ಅಮೆರಿಕದ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಆಂಫಿಬಿಯನ್ಸ್ ಮತ್ತು ರೆಪ್ಟೈಲ್ಸ್ ಜರ್ನಲ್ ಆಫ್ ಹರ್ಪಿಟಾಲಜಿಯಲ್ಲಿ ಲೇಖನ ಪ್ರಕಟವಾಗಿದೆ.
ಹಲ್ಲಿಯ ಕುರಿತು ಮುಂಬೈನ ಠಾಕ್ರೆ ವೈಲ್ಡ್ಲೈಫ್ ಫೌಂಡೇಶನ್ನ ಇಶಾನ್ ಅಗರ್ವಾಲ್ ಮತ್ತು ಅಕ್ಷಯ್ ಖಂಡೇಕರ್ ಅವರ ನೇತೃತ್ವ ತಂಡ ಸಂಶೋಧನೆ ನಡೆಸಿದೆ. ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಉಮೇಶ್ ಪಾವುಕುಂಡಿ, ಸೇಂಟ್ ಜೋಸೆಫ್ ಕಾಲೇಜಿನ ಸಂದೀಪ್ ದಾಸ್, ಯುಎಸ್ನ ವಿಲ್ಲನೋವಾ ವಿಶ್ವವಿದ್ಯಾಲಯದಿಂದ ಆರನ್ ಎಂ. ಬಾಯರ್ ಅವರನ್ನು ಒಳಗೊಂಡಿತ್ತು.
ಬಸ್ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್ಪ್ರೆಸ್ ವೇಯಲ್ಲಿ…
ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್ಸಿಎಲ್ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…
ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್ ನೀಡುತ್ತೇವೆ…
ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…
ದೊಡ್ಮನೆ ಕುಡಿ ಯುವರಾಜ್ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.