ಕೊಚ್ಚಿ,: ‘ಭಾರತ್ ಜೋಡೋ ಯಾತ್ರೆ’ಗಾಗಿ ಕೇರಳದ ವಿವಿಧೆಡೆ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಬೋರ್ಡ್ಗಳು ಹಾಗೂ ಬ್ಯಾನರ್ಗಳನ್ನು ಅಳವಡಿಸಿರುವುದಕ್ಕೆ ಕೇರಳ ಹೈಕೋರ್ಟ್ ಟೀಕಿಸಿದೆ.
ನ್ಯಾಯಾಲಯದ ಆಪ್ತ ಹರೀಶ್ ವಾಸುದೇವನ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿರ್ದಿಷ್ಟ ರಾಜಕೀಯ ಪಕ್ಷವೊಂದು ನಡೆಸುತ್ತಿರುವ ರ್ಯಾಲಿಗಾಗಿ ಕೇರಳಾದ್ಯಂತ ನಾಮಫಲಕ,ಬ್ಯಾನರ್ಗಳು, ಧ್ವಜಗಳ ಹಾಗೂ ಇತರ ಸಾಮಾಗ್ರಿಗಳನ್ನು ಅಕ್ರಮವಾಗಿ ಅಳವಡಿಸಿರುವುದದಾಗಿ ವಾಸುದೇವ್ ಅವರು ಅರ್ಜಿಯಲ್ಲಿ ಆರೋಪಿಸಿದ್ದರು. ಇದಕ್ಕೆ ಪುರಾವೆಯಾಗಿ ಅವರು ಕೆಲವು ಛಾಯಾಚಿತ್ರಗಳನ್ನು ಕೂಡಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಸಾಮಾಗ್ರಿಗಳನ್ನು ಅಕ್ರಮವಾಗಿ ಹೇಗೆ ಅಳವಡಿಸಲಾಯಿತು ಹಾಗೂ ಯಾಕೆ ಅವುಗಳನ್ನು ತೆಗೆದುಹಾಕಲಾಗಿಲ್ಲ ಎಂಬ ಬಗ್ಗೆ ಉತ್ತರಿಸುವಂತೆಯೂ ನ್ಯಾಯಾಲಯವು ಸ್ಥಳೀಯಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ವರಿಷ್ಠರಿಗೆ ನಿರ್ದೇಶನ ನೀಡಿದೆ.