News Karnataka Kannada
Sunday, April 28 2024
ಕೇರಳ

ಶಬರಿಮಲೆ ಸಾಮಗ್ರಿ ಟ್ರ್ಯಾಕ್ಟರ್‌ಗಳ ಸಂಚಾರ ಸಾಗಣೆಗೆ ಸಮಯ ನಿಗದಿ

Sabarimala Ayyappa temple to remain open for 5 days |
Photo Credit :

ಕಾಸರಗೋಡು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರಸಾದ ಮತ್ತು ಅನ್ನದಾನಕ್ಕೆ ಬೇಕಾಗುವ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಸಮಯ ಮಿತಿ ನಿಗದಿ ಮಾಡಿ ಕೇರಳ ಹೈಕೋರ್ಟ್‌ ಗುರುವಾರ ಆದೇಶ ಹೊರಡಿಸಿದೆ. ಸೋಮವಾರ ದಿಂದ ಗುರುವಾರದ ವರೆಗೆ ಬೆಳಗ್ಗೆ 10.30ರಿಂದ ಸಂಜೆ 4ರ ವರೆಗೆ, ರಾತ್ರಿ 10ರಿಂದ ಬೆಳಗ್ಗೆ 3ರ ವರೆಗೆ ಈ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಆದರೆ ಅವು ಭಕ್ತರು ನಡೆದುಕೊಂಡು ಹೋಗುವ ದಾರಿಯಲ್ಲಿ ನಿಧಾನವಾಗಿ ಸಂಚರಿಸುವಂತೆ ಮಾಡಬೇಕು.

ಈ ಬಗ್ಗೆ ಪೊಲೀಸರು ಮುತುವರ್ಜಿ ವಹಿಸ ಬೇಕು ಎಂದು ಸೂಚಿಸಿದೆ. ಜತೆಗೆ ದೈನಿಕ ಪೂಜಾವಿಧಿಗಳಿಗಾಗಿ ಪೂಜಾ ಸಾಮಗ್ರಿಗಳನ್ನು ಪ್ರತೀ ದಿನ ಬೆಳಗ್ಗೆ 5ರಿಂದ 7ರ ವರೆಗೆ ಒಯ್ಯಲು ಹೈಕೋರ್ಟ್‌ ಅನುಮತಿ ಕೊಟ್ಟಿದೆ.

ಈ ಹಿಂದೆ ಡಿ. 10ರಂದು ಆದೇಶ ನೀಡಿದ್ದ ಹೈಕೋರ್ಟ್‌, ತಿರುವಾಂಕೂರು ದೇವಸ್ವಂ ಮಂಡಳಿಯದ್ದಲ್ಲದ ಸರಕು ಸಾಗಣೆ ಟ್ರ್ಯಾಕ್ಟರ್‌ಗಳು ಪಂಬಾದಿಂದ ಸನ್ನಿಧಾನಕ್ಕೆ ಮಧ್ಯರಾತ್ರಿ 12ರಿಂದ ರಾತ್ರಿ 3ರ ವರೆಗೆ ಮಾತ್ರ ಸಂಚರಿಸಬೇಕು ಎಂಬ ತನ್ನ 2017 ನವೆಂಬರ್‌ನ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿತ್ತು. ಇದನ್ನು ಸಡಿಲಿಸಬೇಕು ಎಂದು ದೇವಸ್ವಂ ಮಂಡಳಿ ಮತ್ತು ಜಾಗೃತ ಅಧಿಕಾರಿ ಅರ್ಜಿ ಸಲ್ಲಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು