ತ್ರಿಶೂರ್, ಏ.10 : ತಂದೆ ತಾಯಿ ಇಬ್ಬರನ್ನು ಕಡಿದು ಕೊಂದ ಪಾಪಿ ಮಗ, ತಾನು ಮಾಡಿದ ಘನ ಕಾರ್ಯವನ್ನು ಪೊಲೀಸರಿಗೆ ಕರೆ ಮಾಡಿ ಹೇಳಿ, ಪರಾರಿಯಾಗಿದ್ದಾನೆ. ಕೇರಳದ ತ್ರಿಶೂರ್ ಜಿಲ್ಲೆಯ ಇಂಚಕುಂಡು ಪ್ರದೇಶದಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಗ ಭಾನುವಾರ ಬೆಳಗ್ಗೆ ಮನೆಯ ಆವರಣದಲ್ಲಿ ಹುಲ್ಲು ಕೊಯ್ಯುತ್ತಿದ್ದ ತನ್ನ ತಾಯಿ ಮತ್ತು ತಂದೆಯನ್ನು ಕಡಿದು ಕೊಂದಿದ್ದಾನೆ.
ನಂತರ ಪೊಲೀಸರಿಗೆ ವಿಷಯ ತಿಳಿಸಿ ಮೊಟಾರ್ ಸೈಕಲ್ ನಲ್ಲಿ ಪರಾರಿಯಾಗಿದ್ದಾನೆ.
ಪೋಷಕರು ಮತ್ತು ಆರೋಪಿ ನಡುವೆ ಆಗಾಗ್ಗೆ ಮಾತಿನ ಚಕಮಕಿ ನಡೆಯುತ್ತಿತ್ತು ಎಂದು ನೆರೆ ಹೊರೆಯವರು ತಿಳಿಸಿದ್ದಾರೆ. ಪೋಷಕರ ಶವಗಳು ಮನೆಯ ಹೊರಗಿನ ರಸ್ತೆಬದಿಯಲ್ಲಿ ಕಂಡುಬಂದಿವೆ. ಪೋಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಕಡಿದು ಕೊಂದಿರುವುದು ಸ್ಪಷ್ಟವಾಗಿದೆ. ಪರಾರಿಯಾಗಿರುವ ಮಗ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ.