News Karnataka Kannada
Monday, April 29 2024
ಕೇರಳ

ಕೇರಳದ ಮಾಜಿ ಡಿಜಿಪಿ ಸಿಬೈ ಮಾಥ್ಯೂಸ್ ಗೆ ನಿರೀಕ್ಷಣಾ ಜಾಮೀನು

Kerala High Court Dt 17 6 21 Dt 1762113 1 Newsk 7090924364
Photo Credit :

ತಿರುವನಂತಪುರಂ, ;ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೋದ ನಿವೃತ್ತ ವಿಜ್ಞಾನಿ ನಂಬಿ ನಾರಾಯಣ್ ಮತ್ತು ಇಬ್ಬರು ಮಾಲ್ಡೀವ್ಸ್ ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಕೇರಳದ ಮಾಜಿ ಡಿಜಿಪಿ ಸಿಬೈ ಮಾಥ್ಯೂಸ್ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿದೆ. ಕೇರಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಈ ಪ್ರಕರಣ ನಾನಾ ತಿರುವುಗಳನ್ನು ಪಡೆದುಕೊಂಡಿದೆ.
1994ರಲ್ಲಿ ದೇಶದ ಪ್ರತಿಷ್ಠಿತ ಇಸ್ರೋ ಸಂಸ್ಥೆಯಿಂದ ಸಂಶೋಧನೆಗೆ ಸಂಬಂಧಿಸಿದ ದಾಖಲೆಗಳನ್ನು ನಂಬಿ ನಾರಾಯಣ್, ಇಬ್ಬರು ಮಾಲ್ಡಿವ್ಸ್ ಮಹಿಳೆಯರು ಹಾಗೂ ಇತರರು ಸೇರಿಕೊಂಡು ವಿದೇಶಗಳಿಗೆ ಮಾರಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ವಿಜ್ಞಾನಿ ನಂಬಿ ನಾರಾಯಣ್, ಮಾಲ್ಡೀವ್ಸ್ ಪ್ರಜೆಗಳಾದ ಮರಿಯಮ್ ರಶೀದಾ, ಫೌಜೀಯಾ ಹಸ್ಸನ್ ರನ್ನು ಕೇರಳ ಪೊಲೀಸರು ಬಂಧಿಸಿದ್ದರು.ಆರೋಪ ಕುರಿತು ವಿಚಾರಣೆ ನಡೆಸಿ ವರದಿ ನೀಡಲು 2018ರಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್ ನೇತೃತ್ವದಲ್ಲಿ ಮೂವರ ಸಮಿತಿಯನ್ನು ರಚನೆ ಮಾಡಿತ್ತು. ಆ ಸಮಿತಿ ವರದಿ ನೀಡಿ ನಾರಾಯಣ್‍ರನ್ನು ಆರೋಪ ಮುಕ್ತರನ್ನಾಗಿ ಮಾಡಿತ್ತು. ಅದರ ಬೆನ್ನಲ್ಲೆ ಹೈಕೋರ್ಟ್ ಕೇರಳ ಸರ್ಕಾರಕ್ಕೆ ಆದೇಶ ನೀಡಿ ನಾರಾಯಣ್‍ರಿಗೆ ಮಾನನಷ್ಟ ಪರಿಹಾರವಾಗಿ 50 ಲಕ್ಷ ಪಾವತಿಸುವಂತೆ ಸೂಚಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು