News Karnataka Kannada
Saturday, May 04 2024
ದೇಶ

ಜುನೈದ್‌ – ನಾಸಿರ್ ಕೊಲೆ ಕೇಸ್: ಗೋರಕ್ಷಕ ಮಾನೇಸರ್‌ ಪೊಲೀಸ್‌ ವಶಕ್ಕೆ

Junaid-Nasir murder case: Gau rakshak taken into custody by Manesar police
Photo Credit : News Kannada

ಗುರುಗ್ರಾಮ: ಜುನೈದ್‌-ನಾಸಿರ್ ಕೊಲೆ ಪ್ರಕರಣದ ಆರೋಪಿ ಬಜರಂಗ ದಳದ ಕಾರ್ಯಕರ್ತ, ಗೋರಕ್ಷಕ ಮೋನು ಮಾನೇಸರ್ ಅವರನ್ನು ನಾಲ್ಕು ದಿನ ಪೊಲೀಸ್‌ ವಶಕ್ಕೆ ನೀಡಿ ಇಲ್ಲಿನ ಸ್ಥಳೀಯ ನ್ಯಾಯಾಲಯ ಇಂದು ಆದೇಶಿಸಿದೆ.

ಪಟೌದಿಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತರನ್ನುಮ್‌ ಖಾನ್ ಅವರೆದುರು ಮಾನೇಸರ್‌ ಅವರನ್ನು ಹಾಜರುಪಡಿಸಲಾಗಿತ್ತು.

‘ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಆರೋಪಿಯ ಸಹಚರರಿಂದ ವಶಕ್ಕೆ ಪಡೆಯಲಾಗುವುದು. ಪಾತಕಿಗಳ ಗುಂಪಿನೊಂದಿಗೆ ಮಾನೇಸರ್ ನಂಟು ಹೊಂದಿದ್ದಾರೆಯೇ ಎಂಬ ಆಯಾಮದಲ್ಲೂ ವಿಚಾರಣೆ ನಡೆಸಬೇಕಿದೆ.

ಹೀಗಾಗಿ ಏಳು ದಿನ ಆರೋಪಿಯನ್ನು ವಶಕ್ಕೆ ನೀಡಬೇಕು ಎಂದು ಗುರುಗ್ರಾಮ ಪೊಲೀಸರು ಮನವಿ ಮಾಡಿದರು. ಆದರೆ ಕೋರ್ಟ್‌ ನಾಲ್ಕು ದಿನ ಮಾತ್ರ ವಶಕ್ಕೆ ನೀಡಿತು’ ಎಂದು ಮಾನೇಸರ್ ಪರ ವಕೀಲ ವಕೀಲ ಕುಲಭೂಷಣ್ ಭಾರದ್ವಾಜ್‌ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು