ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ರಾಂಚಿ ಪೋಲೀಸರು ಖಚಿತಪಡಿಸಿದ್ದಾರೆ.
ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ವಿಚಾರಣೆ ನಡೆಸಲು ED ತಂಡ ಸೋಮವಾರ ದೆಹಲಿಯಲ್ಲಿರುವ ಸೋರೆನ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ಅವರು ಅಲ್ಲಿರಲಿಲ್ಲ. ಮನೆ ಶೋಧದ ಸಮಯದಲ್ಲಿ ೩೬ಲಕ್ಷ ನಗದು ಮತ್ತು ದಾಖಲೆಗಳು ದೊರಕಿವೆ ಎನ್ನಲಾಗಿದೆ.
ಜ.೨೭ ಮತ್ತು ೨೮ರ ಇಡಿ ದಾಳಿಯಲ್ಲಿ ಬಿಎಂಡಬ್ಲ್ಯು ಎಸ್ಯುವಿ ಕಾರು ಹಾಗೂ ಹಣ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದು ನನ್ನದಲ್ಲ. ಶೋಧದ ಸಮಯದಲ್ಲಿ ಅಧಿಕಾರಿಗಳು ನನ್ನ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಸಿಎಂ ಸೊರೆನ್ ದೂರಿನಲ್ಲಿ ಆರೋಪಿಸಿದ್ದಾರೆ.