News Karnataka Kannada
Thursday, May 02 2024
ಝಾರ್ಖಂಡ್

2500 ರೂಪಾಯಿಗಾಗಿ ತಂದೆಯನ್ನೇ ಕೊಲೆ ಮಾಡಿದ ಪುತ್ರ

Police
Photo Credit :

ರಾಂಚಿ: ಕೇವಲ ಎರಡೂವರೆ ಸಾವಿರ ರೂಪಾಯಿಗಾಗಿ ತಂದೆಯನ್ನ ಪುತ್ರನೇ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಿಂಡ್ರಾ ಗ್ರಾಮದಲ್ಲಿ ನಡೆದಿದೆ.
ಮಹದೇವ್ ಉರಾಂವ್ ತಂದೆಯನ್ನ ಕೊಂದ ಮಗ. ಗುರುವಾರ ಬೆಳಗಿನ ಜಾವ ಮಲಗಿದ್ದ ತಂದೆಯನ್ನು ಕೊಂದ ಮಹದೇವ್ ನಾಪತ್ತೆ ಆಗಿದ್ದನು. ಆದ್ರೆ ಗ್ರಾಮಸ್ಥರು ಆರೋಪಿಯನ್ನು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಹದೇವ್ ತಂದೆ ಜಮೀನಿನ ಒಂದು ಚಿಕ್ಕ ಭಾಗವನ್ನು ಮಾರಿದ್ದರು. ಈ ಮಾರಾಟದಿಂದ 5,200 ರೂಪಾಯಿ ಸಿಕ್ಕಿತ್ತು. ತಂದೆ-ಮಗ ಇಬ್ಬರೂ 2,500 ರೂ. ಹಂಚಿಕೊಂಡಿದ್ದರು. ಆದ್ರೆ ಮರುದಿನ ಬೆಳಗ್ಗೆ 4 ಗಂಟೆಗೆ ತಂದೆಯನ್ನ ಕೊಂದು ಹಣ ಎತ್ಕೊಂಡು ಮಹದೇವ್ ಪರಾರಿಯಾಗಿದ್ದನು. ಕೊಲೆ ನಡೆದ ಹಿಂದಿನ ರಾತ್ರಿ ಅಪ್ಪ-ಮಗನ ನಡುವೆ ಹಣದ ವಿಚಾರವಾಗಿ ಜಗಳ ನಡೆದಿತ್ತು ಎನ್ನಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು