ರಾಂಚಿ : ವಾಮಾಚಾರ ಮಾಡುತ್ತಾಳೆ ಎನ್ನುವ ಗುಮಾನಿಯಿಂದ ವೃದ್ಧೆಯನ್ನು ಜೀವಂತ ದಹನ ಮಾಡಲು ಯತ್ನಿಸಿದ ಪ್ರಕರಣ ಜಾರ್ಖಂಡ್ ರಾಜ್ಯದ ಸಿಮ್ದೇಗ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತೆಯನ್ನು ಜರಿಯೊ ದೇವಿ ಎಂದು ಗುರುತಿಸಲಾಗಿದೆ. ಆಕೆಯನ್ನು ಊರಿನ ಕೆಲವು ಮಂದಿ ರಾತ್ರಿ ಭೋಜನಕ್ಕೆ ಆಹ್ವಾನಿಸಿದ್ದರು. ಊರಿನಲ್ಲಿ ಮಹಿಳೆಯೋರ್ವರು ತೀರಿಕೊಂಡಿದ್ದ ಪ್ರಯುಕ್ತ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಜರಿಯೊ ದೇವಿ ರಾತ್ರಿ ಊಟ ಮಾಡಲೆಂಡು ಅಲ್ಲಿಗೆ ಬಂದಿದ್ದರು. ನಿಧನ ಹೊಂದಿದ್ದ ಮಹಿಳೆಯ ಪತಿ ತನ್ನ ಮಡದಿ ಸಾವಿಗೆ ವೃದ್ಧೆ ಮಾಡಿಸಿದ ಮಾಟ ಕಾರಣ ಎಂದು ಆರೋಪಿಸಿದರು. ಜನರು ನೋಡುತ್ತಿದ್ದಂತೆಯೇ ಸಂಬಂಧಿಕರ ಗುಂಪೊಂದು ವೃದ್ಧೆಯನ್ನು ಎತ್ತಿಕೊಂಡು ಹುಲ್ಲಿನ ಮೆದೆ ಬಳಿಗೆ ಕರೆದೊಯ್ದಿತ್ತು.
ಅಲ್ಲಿ ವೃದ್ಧೆ ಮೈ ಮೇಲೆ ಸೀಮೆ ಎಣ್ನೆ ಎರಚಿ ಹುಲ್ಲಿನ ಮೆದೆ ಜೊತೆಗೆ ಬೆಂಕಿ ಹಚ್ಚಲಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ಗ್ರಾಮಸ್ಥರು ವೃದ್ಧೆಯನ್ನು ಪಾರು ಮಾಡು ಆಸ್ಪತ್ರೆಗೆ ದಾಖಲಿಸಿದ್ದರು. ವೃದ್ಧೆ ಅಪಾಯದಿಂದ ಪಾರಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…
ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.
ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…
ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…