ಜಮ್ಮು: ಹೆದ್ದಾರಿ ಮೇಲೆ ಕಲ್ಲು ಉರುಳಿದ ಪರಿಣಾಮ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಹಾದ್ನ ರಸ್ತೆಗೆ ಅಡ್ಡಲಾಗಿ ಕಲ್ಲುಗಳು ಉರುಳಿದ್ದು, ತೀವ್ರ ಜಾರುತ್ತಿರುವ ಕಾರಣ ಎನ್ ಎಚ್ 44 ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಲುಗಳ ತೆರವು ಕಾರ್ಯ ಪ್ರಗತಿಯಲ್ಲಿದೆ . ಕಾಶ್ಮೀರದಿಂದ ದೇಶದ ಉಳಿದ ಭಾಗಗಳಿಗೆ ಹಣ್ಣು ಸಾಗಿಸುವ ಟ್ರಕ್ಗಳು ಈ ರಸ್ತೆಯ ಮೂಲಕ ಹೋಗುತ್ತವೆ.