ಶ್ರೀನಗರ: ಲಡಾಖ್ನ ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ಬುಧವಾರ ಸೈನಿಕರ ಟೆಂಟ್ನಲ್ಲಿ ಬೆಂಕಿ ಅನಾಹುತವಾಗಿದ್ದು, ಸೇನಾಧಿಕಾರಿಯೊಬ್ಬರು ಮೃತಪಟ್ಟಿದ್ದು, ಇತರ ಆರು ಸೈನಿಕರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಬುಧವಾರ ಬೆಳಗಿನ ಜಾವ 3.30ರ ಸುಮಾರಿಗೆ ಟೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತೀವ್ರವಾಗಿ ಗಾಯಗೊಂಡ ಮೂವರು ಸೈನಿಕರನ್ನು ಚಂಡೀಗಢಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಮದ್ದುಗುಂಡುಗಳ ಟೆಂಟ್ಗೆ ಬೆಂಕಿ ಹರಡುವ ಮೊದಲು ಅಗ್ನಿ ನಂದಿಸಲಾಗಿದೆ.
ಬೆಂಕಿ ಅನಾಹುತದಲ್ಲಿ ಕೆಲವು ಟೆಂಟ್ಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆಗೆ ಸೇನೆ ನಿರ್ಧರಿಸಿದೆ.