ಶ್ರೀನಗರ: ನೌಗಾಮ್ ಪ್ರದೇಶದ ಶಂಕರ್ಪೋರಾದಲ್ಲಿ ಬುಧವಾರ (ಮಾ.16) ಎನ್ಕೌಂಟರ್ ನಂತರ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ಎನ್ಕೌಂಟರ್ ಪ್ರದೇಶದ ಸುತ್ತ ಸೂಚನಾಫಲಕ ಹಾಕಿದ್ದರೂ ಲೆಕ್ಕಿಸದೇ ಗುಂಡಿನ ಕಾಳಗದ ಪ್ರದೇಶದತ್ತ ಧಾವಿಸಿ ಭದ್ರತಾ ಪಡೆ ಸಿಬ್ಬಂದಿ ಮೇಲೆ ಕಲ್ಲೂ ತೂರಾಟ ನಡೆಸಿದ್ದರು. ಕೃತ್ಯದಲ್ಲಿ ಭಾಗಿಯಾದ 15 ಮಂದಿಯನ್ನು ಗುರುತಿಸಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ನಂತರ ಲಾಠಿ ಹಾಗೂ ಕಲ್ಲು ಹಿಡಿದಿದ್ದ ಗುಂಪನ್ನು ಚದುರಿಸಲು ಅಶ್ರುವಾಯು ಸಿಡಿಸಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಮಾರ್ಚ್ 16 ರಂದು ನೌಗಾಮ್ ಪ್ರದೇಶದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನು ತಟಸ್ಥಗೊಳಿಸಿದ ನಂತರ ನಾಗರಿಕರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಅನುಸಾರ ಪ್ರದೇಶವನ್ನು ಉಗ್ರರು ಅಡಗಿದ್ದ ಪ್ರದೇಶವನ್ನು ಸ್ಯಾನಿಟೈಸ್ ಮಾಡುತ್ತಿದ್ದ ವೇಳೆ ಗುಂಪು ಕಲ್ಲು ತೂರಾಟ ನಡೆಸಿತ್ತು.