News Karnataka Kannada
Monday, April 29 2024
ಜಮ್ಮು-ಕಾಶ್ಮೀರ

ಬಾರಾಮುಲ್ಲಾ ಗ್ರೆನೇಡ್ ದಾಳಿ : ಎಲ್ಇಟಿಯ 4 ಉಗ್ರರ ಬಂಧನ

Untitled 157
Photo Credit :

ಶ್ರೀನಗರ: ಕಾಶ್ಮೀರದ ಉತ್ತರ ಬಾರಾಮುಲ್ಲಾದಲ್ಲಿ ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದ ವೈನ್ ಶಾಪ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದವರ ಪೈಕಿ ಎಲ್‌ಇಟಿಯ ನಾಲ್ವರು ಉಗ್ರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ನಾಲ್ವರು ಭಯೋತ್ಪಾದಕರು, ಓರ್ವ ಎಲ್‌ಇಟಿ ಸಂಘಟನೆಯ ಸಹಚರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗ್ರೆನೇಡ್ ದಾಳಿಯಲ್ಲಿ ವೈನ್ ಶಾಪ್ ನ ನೌಕರನೋರ್ವ ಸಾವನ್ನಪ್ಪಿದ್ದ ಹಾಗೂ ಇನ್ನೂ ಮೂವರು ನೌಕರರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಂಧಿತರಿಂದ ಐದು ಪಿಸ್ತೂಲ್ ಗಳು, 23 ಗ್ರೆನೇಡ್ ಗಳು ಹಾಗೂ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಭಯೋತ್ಪಾದನೆಯ ಮಾದರಿಯನ್ನು ಬಾರಾಮುಲ್ಲಾದಲ್ಲಿ ಹಲವೆಡೆ ಪ್ರಯೋಗಿಸಲಾಗಿತ್ತು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಐಜಿಪಿ ಹೇಳಿದ್ದಾರೆ.

ಉಗ್ರ ಬುರ್ಖಾ ಧರಿಸಿ ವೈನ್ ಶಾಪ್ ಗೆ ಆಗಮಿಸಿ ಗ್ರೆನೇಡ್ ದಾಳಿ ನಡೆಸಿದ್ದ. ನಂತರ ಮತ್ತೋರ್ವ ಉಗ್ರನ ಜೊತೆ ಪರಾರಿಯಾಗಿದ್ದ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು