News Karnataka Kannada
Monday, April 29 2024
ಜಮ್ಮು-ಕಾಶ್ಮೀರ

 ನದಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಶವ ಪಾಕಿಸ್ತಾನದಲ್ಲಿ ಪತ್ತೆ

Untitled 1
Photo Credit :

 ಜಮ್ಮು ಕಾಶ್ಮೀರ : ಸ್ನಾನಕ್ಕೆಂದು ನದಿಗಿಳಿದಾಗ ಮುಳುಗಿ ನೀರು ಪಾಲಾಗಿದ್ದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಲಕನ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆಯಾಗಿದೆ.

ಇಂದು ಪಾಕ್​ ಅಧಿಕಾರಿಗಳು ಬಾಲಕನ ಮೃತದೇಹವನ್ನು ಭಾರತಕ್ಕೆ ಹಸ್ತಾಂತರಿಸಿದ್ದಾರೆ.

ಪೂಂಚ್​ ಜಿಲ್ಲೆಯ ಸುರನಕೋಟೆ ನಿವಾಸಿ ಜಮೀನ್​ ರಸೂಲ್​ ಮೃತ ಬಾಲಕ. ರಸೂಲ್​ ಮೇ 3 ರಂದು ಇಲ್ಲಿನ ಎಸ್‌ಕೆ ಸೇತುವೆ ಬಳಿಯ ಪುಲಾಸ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮುಳುಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ರಕ್ಷಣಾ ತಂಡಗಳು ಬಾಲಕನ ಮೃತದೇಹವನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದರು.

ಪಾಕ್ ಆಕ್ರಮಿತ ಕಾಶ್ಮೀರದ ಟೆಟ್ರಿನೋಟ್ ಪ್ರದೇಶದಲ್ಲಿ ಬಾಲಕನ ಮೃತದೇಹವನ್ನು ಕಂಡ ಪಾಕಿಸ್ತಾನ ಸೇನೆ ಬಳಿಕ ಭಾರತೀಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಲಕನ ಬಗ್ಗೆ ಮಾಹಿತಿ ದೃಢಪಟ್ಟ ನಂತರ ಪೂಂಚ್‌ನ ಎಲ್‌ಒಸಿಯಲ್ಲಿ ಉಭಯ ದೇಶಗಳ ಅಧಿಕಾರಿಗಳ ಸಮ್ಮುಖದಲ್ಲಿ ಬಾಲಕನ ಶವವನ್ನು ವಶಕ್ಕೆ ಪಡೆಯಲಾಯಿತು. ಕಾನೂನಾತ್ಮಕ ವಿಚಾರಣೆಯ ಬಳಿಕ ಅಂತಿಮ ವಿಧಿ-ವಿಧಾನಗಳಿಗಾಗಿ ಬಾಲಕನ ಕುಟುಂಬಕ್ಕೆ ಮೃತದೇಹವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು