ಜಮ್ಮು- ಕಾಶ್ಮೀರದಲ್ಲಿ ಶನಿವಾರ ಭಾರೀ ಮಳೆ ಸುರಿದಿದ್ದು, ಇದರ ಪರಿಣಾಮ ಅಧಿಕ ಮಟ್ಟದ ಹಿಮಪಾತವಾಗಿದೆ. ಇದರಿಂದಾಗಿ ಮೂವರು ಮೃತಪಟ್ಟಿದ್ದು, ಸೇಬು ತೋಟಗಳಿಗೂ ಅಪಾರ ಹಾನಿಯಾಗಿದೆ.
ನಿನ್ನೆ ಶ್ರೀನಗರದಲ್ಲಿ ಕನಿಷ್ಠ ತಾಪಮಾನ ದಾಖಲಾಗಿ ಭಾರೀ ಮಳೆ ಆರಂಭವಾಗಿದ್ದು, ಪುಲ್ವಾಮಾದ ಟ್ರಾಲ್ ಪ್ರದೇಶದ ನೂರ್ಪೊರಾದಲ್ಲಿ ಟೆಂಟೊಂದರ ಮೇಲೆ ಭೂಕುಸಿತ ಸಂಭವಿಸಿದೆ. ಮೂವರು ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಲ್ಮಾರ್ಗ್, ಸೋನಾಮಾರ್ಗ್, ಮೀನಾಮಾರ್ಗ್, ಲಾಡಾಖ್ನ ದ್ರಾಸ್, ಪಹಲ್ಗಾಂ, ಶೋಪಿಯಾನ್ ಹಾಗೂ ಗ್ರುಯೆಜ್ ಪ್ರದೇಶಗಳಲ್ಲಿ ಹಿಮಪಾತವಾಗಿದೆ. ಇದರಿಂದಾಗಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಮತ್ತು ಕುಲ್ಗಾಂ ಜಿಲ್ಲೆಗಳಲ್ಲಿ ಸೇಬು ತೋಟಗಳಿಗೆ ಅಪಾರ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.