ಮುಂಬೈ: ಮನೆಯ ಇಂಟರ್ನೆಟ್ ರೂಟರ್ ಸಮಸ್ಯೆಯನ್ನು ಪರಿಹರಿಸಲು ಬಂದ ಇಬ್ಬರು ಎಂಜಿನಿಯರ್ ಗಳ ಮೇಲೆ ಐಎಎಸ್ ಅಧಿಕಾರಿ ಹಲ್ಲೆ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಐಎಎಸ್ ಅಧಿಕಾರಿ ಅಮನ್ ಮಿತ್ತಲ್ ಮತ್ತು ಅವರ ಸಹೋದರ ದೇವೇಶ್ ಹಲ್ಲೆ ನಡೆಸಿದ್ದಾರೆ. ಇದ್ದರಿಂದ ಎಂಜಿನಿಯರ್ ಒಬ್ಬರ ಕಾಲ್ಬೆರಳು ಮುರಿತಕ್ಕೊಳಗಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆ ಡಿ.30 ರಂದು ಮುಂಬೈಯ ಘನ್ಸೋಲಿಯಲ್ಲಿರುವ ಐಎಎಸ್ ಅಧಿಕಾರಿ ಅಮನ್ ಮಿತ್ತಲ್ ಅವರ ಮನೆಯಲ್ಲಿ ನಡೆದಿದೆ. ಇಂಟರ್ನೆಟ್ ರೂಟರ್ ಸಮಸ್ಯೆಯನ್ನು ಸರಿ ಮಾಡಲು ಬಂದ ಏರ್ಟೆಲ್ ಎಂಜಿನಿಯರ್ಗಳಾದ ಭೂಷನ್ ಗುಜರ್ ಮತ್ತು ಸಾಗರ್ ಮಂಧಾರೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಮನೆಯ ವೈಫೈ ಸರಿಪಡಿಸುವ ವೇಳೆಯಲ್ಲಿ ಎಂಜಿನಿಯರ್ಗಳು ಮತ್ತು ಮಿತ್ತಲ್ ಸಹೋದರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಿತ್ತಲ್ ಸಹೋದದರು ರಾಡ್ ಮತ್ತು ಪೈಪ್ನಿಂದ ಎಂಜಿನಿಯರ್ಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.