News Karnataka Kannada
Monday, April 29 2024
ಹಿಮಾಚಲ ಪ್ರದೇಶ

ದೀಪಾವಳಿ: ಕಲ್ಲು ಹೊಡೆದುಕೊಂಡು ರಕ್ತದಿಂದ ದೇವರಿಗೆ ತಿಲಕ ಇಡುವ ಆಚರಣೆ

Diwali: The ritual of pelting stones and placing tilak on the deity with blood
Photo Credit : News Kannada

ಶಿಮ್ಲಾ: ಶಿಮ್ಲಾದಲ್ಲಿ ದೀಪಾವಳಿಯಲ್ಲಿ ವಿಶಿಷ್ಟ ಆಚರಣೆಯೊಂದು ಚಾಲ್ತಿಯಲ್ಲಿದೆ. ಶಿಮ್ಲಾ ಬಳಿಯ ಹಿಂದೆ ಅಸ್ತಿತ್ವದಲ್ಲಿದ್ದ ರಾಜಪ್ರಭುತ್ವಕ್ಕೆ ಸೇರಿದ ಎಸ್ಟೇಟ್‌ನಲ್ಲಿ ಸೋಮವಾರ ವಿಶಿಷ್ಟ ಆಚರಣೆ ಜರುಗಿತು.

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಿಂದ 25 ಕಿಮೀ ದೂರದಲ್ಲಿರುವ ಧಾಮಿಯಲ್ಲಿ ಸಾಂಪ್ರದಾಯಿಕ ಕಲ್ಲು ಎಸೆಯುವ ಹಬ್ಬ ‘ಪಥರೋನ್ ಕಾ ಖೇಲ್’ ನಲ್ಲಿ ಭಾಗವಹಿಸಲು \ ನೂರಾರು ಸ್ಥಳೀಯರು ಬಂದಿದ್ದರು. ಹೊಸ ಬಟ್ಟೆಗಳನ್ನು ಧರಿಸಿ, ಎರಡು ಗುಂಪುಗಳಾಗಿ ವಿಂಗಡಿಸಲಾದ ಗ್ರಾಮಸ್ಥರು (ಒಂದು ಹಿಂದಿನ ರಾಜಮನೆತನಕ್ಕೆ ಸೇರಿದವರು ಮತ್ತು ಇನ್ನೊಂದು ಸಾಮಾನ್ಯರನ್ನು ಒಳಗೊಂಡಿರುವ ಗುಂಪು) ಸುಮಾರು 15-20 ನಿಮಿಷಗಳ ಕಾಲ ಪರಸ್ಪರ ಕಲ್ಲುಗಳನ್ನು ಎಸೆದುಕೊಂಡರು.

ಬಳಿಕ ಗಾಯದಿಂದ ಹೊರಹೊಮ್ಮಿದ ರಕ್ತವನ್ನು ದೇವರಿಗೆ ತಿಲಕ ಇಡಲಾಯಿತು. ದಂತಕಥೆಯ ಪ್ರಕಾರ, ದೇವರನ್ನು ಒಲಿಸಿಕೊಳ್ಳಲು ‘ನರಬಲಿ’ ಆಚರಣೆಯು ಈ ಹಿಂದೆ ಅಸ್ತಿತ್ವದಲ್ಲಿತ್ತು. ಬಳಿಕ ಈ ಆಚರಣೆಯನ್ನು ನಿಲ್ಲಿಸಲಾಗಿತ್ತು ಎಂಬ ಮಾಹಿತಿಯಿದೆ. ಇನ್ನು ಸ್ಥಳೀಯ ಆಡಳಿತವು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು