ಶಿಮ್ಲಾ: ಶಿಮ್ಲಾದಲ್ಲಿ ದೀಪಾವಳಿಯಲ್ಲಿ ವಿಶಿಷ್ಟ ಆಚರಣೆಯೊಂದು ಚಾಲ್ತಿಯಲ್ಲಿದೆ. ಶಿಮ್ಲಾ ಬಳಿಯ ಹಿಂದೆ ಅಸ್ತಿತ್ವದಲ್ಲಿದ್ದ ರಾಜಪ್ರಭುತ್ವಕ್ಕೆ ಸೇರಿದ ಎಸ್ಟೇಟ್ನಲ್ಲಿ ಸೋಮವಾರ ವಿಶಿಷ್ಟ ಆಚರಣೆ ಜರುಗಿತು.
ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಿಂದ 25 ಕಿಮೀ ದೂರದಲ್ಲಿರುವ ಧಾಮಿಯಲ್ಲಿ ಸಾಂಪ್ರದಾಯಿಕ ಕಲ್ಲು ಎಸೆಯುವ ಹಬ್ಬ ‘ಪಥರೋನ್ ಕಾ ಖೇಲ್’ ನಲ್ಲಿ ಭಾಗವಹಿಸಲು \ ನೂರಾರು ಸ್ಥಳೀಯರು ಬಂದಿದ್ದರು. ಹೊಸ ಬಟ್ಟೆಗಳನ್ನು ಧರಿಸಿ, ಎರಡು ಗುಂಪುಗಳಾಗಿ ವಿಂಗಡಿಸಲಾದ ಗ್ರಾಮಸ್ಥರು (ಒಂದು ಹಿಂದಿನ ರಾಜಮನೆತನಕ್ಕೆ ಸೇರಿದವರು ಮತ್ತು ಇನ್ನೊಂದು ಸಾಮಾನ್ಯರನ್ನು ಒಳಗೊಂಡಿರುವ ಗುಂಪು) ಸುಮಾರು 15-20 ನಿಮಿಷಗಳ ಕಾಲ ಪರಸ್ಪರ ಕಲ್ಲುಗಳನ್ನು ಎಸೆದುಕೊಂಡರು.
ಬಳಿಕ ಗಾಯದಿಂದ ಹೊರಹೊಮ್ಮಿದ ರಕ್ತವನ್ನು ದೇವರಿಗೆ ತಿಲಕ ಇಡಲಾಯಿತು. ದಂತಕಥೆಯ ಪ್ರಕಾರ, ದೇವರನ್ನು ಒಲಿಸಿಕೊಳ್ಳಲು ‘ನರಬಲಿ’ ಆಚರಣೆಯು ಈ ಹಿಂದೆ ಅಸ್ತಿತ್ವದಲ್ಲಿತ್ತು. ಬಳಿಕ ಈ ಆಚರಣೆಯನ್ನು ನಿಲ್ಲಿಸಲಾಗಿತ್ತು ಎಂಬ ಮಾಹಿತಿಯಿದೆ. ಇನ್ನು ಸ್ಥಳೀಯ ಆಡಳಿತವು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿತ್ತು.