News Karnataka Kannada
Saturday, May 11 2024
ಹರ್ಯಾಣ

ಹಿಂದೂಗಳ ವಿರುದ್ಧ ವರ್ತಿಸುವಂತೆ ಪೊಲೀಸರಿಗೆ ಒತ್ತಡವಿದೆ ಎಂದಿದ್ದ ಪತ್ರಿಕೆ ಸಂಪಾದಕರ ಸೆರೆ

Newspaper editor arrested for saying police were under pressure to act against Hindus
Photo Credit : IANS

ಗುರುಗ್ರಾಮ್: ಸುದರ್ಶನ್ ನ್ಯೂಸ್ ರೆಸಿಡೆಂಟ್ ಎಡಿಟರ್ ಮುಖೇಶ್ ಕುಮಾರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 9 ರಂದು ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 153 ಬಿ, 401, 469, ಮತ್ತು 505 (1) (ಸಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66-ಸಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

“ಆಗಸ್ಟ್ 8 ರಂದು ಟ್ವಿಟರ್‌ ನಲ್ಲಿ ಮಹೇಶ್‌ ಕುಮಾರ್‌ ಆಧಾರ ರಹಿತ, ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಸಂಗತಿಗಳನ್ನು ಟ್ವೀಟ್ ಮಾಡಿದ ಕಾರಣ ಬಂಧನ ನಡೆದಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ ಜಜೀರಾ ಸುದ್ದಿ ವಾಹಿನಿಯಿಂದ ಗುರುಗ್ರಾಮ್ ಪೊಲೀಸ್ ಆಯುಕ್ತರಿಗೆ ಕರೆ ಬಂದಿದ್ದು, ಹಿಂದೂಗಳ ವಿರುದ್ಧ ವರ್ತಿಸುವಂತೆ ಪೊಲೀಸರ ಮೇಲೆ ಒತ್ತಡವಿದೆ ಎಂದು ಕುಮಾರ್ ಟ್ವೀಟ್ ಮಾಡಿದ್ದರು. ಜುಲೈ 31 ರಂದು ನುಹ್ ಮತ್ತು ಗುರುಗ್ರಾಮ್ ಜಿಲ್ಲೆಗಳಲ್ಲಿ ವಿಎಚ್‌ಪಿ ಮೆರವಣಿಗೆ ವೇಳೆ ಕೋಮು ಸಂಘರ್ಷ ನಡೆದಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕುಮಾರ್‌ ಅವರನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು