News Karnataka Kannada
Monday, April 29 2024
ದೆಹಲಿ

ಮುಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಪ್ರಮುಖ ಶೂಟರ್ ಗಳ ಬಂಧನ

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಎರಡು ಲಾರಿ ಹಾಗೂ ಸಾವಿರಾರು ರೂಪಾಯಿ ಮೌಲ್ಯದ ಮರಳನ್ನು ಹಾಗೂ ನಾಲ್ಕು ಮಂದಿ ಆರೋಪಿಗಳನ್ನು ಬಂಟ್ವಾಳ ‌ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೋಲೀಸ್ ತಂಡ ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
Photo Credit :

ನವದೆಹಲಿ: ಸಿಧು ಮುಸೆವಾಲಾ ಎಂದೇ ಜನಪ್ರಿಯರಾಗಿರುವ ಪಂಜಾಬಿ ಗಾಯಕ ಶುಭ್ ದೀಪ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಪ್ರಮುಖ ಶೂಟರ್ ಗಳು ಮತ್ತು ಅವರ ಒಬ್ಬ ಆಯೋಜಕನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಸೋಮವಾರ ಬಂಧಿಸಿದೆ.

“ಇಬ್ಬರು ಶೂಟರ್ ಗಳಲ್ಲಿ ಒಬ್ಬರು ಮಾಡ್ಯೂಲ್ ನ ಮುಖ್ಯಸ್ಥರಾಗಿದ್ದಾರೆ” ಎಂದು ದೆಹಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹರಿಯಾಣದ ಸೋನಿಪತ್ ನಿವಾಸಿ ಪ್ರಿಯವ್ರತ್ ಅಲಿಯಾಸ್ ಫೌಜಿ (26) ಮತ್ತು ಕಾಶಿಶ್ ಅಲಿಯಾಸ್ ಕುಲದೀಪ್ (24) ಬಂಧಿತ ಆರೋಪಿಗಳು.

ಗ್ಯಾಂಗ್ ಸ್ಟರ್ ಗಳ ‘ಬೊಲೆರೊ ಮಾಡ್ಯೂಲ್’ ನ ಮುಖ್ಯಸ್ಥನಾಗಿದ್ದ ಆರೋಪಿ ಪ್ರಿಯವ್ರತ್, ಶೂಟರ್ ಗಳ ತಂಡವನ್ನು ಮುನ್ನಡೆಸಿದ್ದ ಮತ್ತು ಘಟನೆಯ ಸಮಯದಲ್ಲಿ ಗೋಲ್ಡಿ ಬ್ರಾರ್ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದನು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಆರೋಪಿ ಪ್ರಿಯವ್ರತ್ ಈ ಹಿಂದೆ ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಸೋನಿಪತ್ನ ಒಂದು ಕೊಲೆ ಪ್ರಕರಣದಲ್ಲಿ 2015 ರಲ್ಲಿ ಬಂಧಿಸಲ್ಪಟ್ಟಿದ್ದನು ಮತ್ತು 2021 ರಲ್ಲಿ ಸೋನಿಪತ್ನ ಮತ್ತೊಂದು ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದನು.

ಎರಡನೇ ಆರೋಪಿ ಶೂಟರ್ ಕುಲದೀಪ್, ಘಟನೆಗೆ ಮೊದಲು ಪೆಟ್ರೋಲ್ ಪಂಪ್ ಫತೇಘರ್ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಂಧಿತನನ್ನು ಪಂಜಾಬ್ ನ ಭಟಿಂಡಾ ನಿವಾಸಿ ಕೇಶವ್ ಕುಮಾರ್ (29) ಎಂದು ಗುರುತಿಸಲಾಗಿದೆ. “ಆರೋಪಿ ಕೇಶವ್ ಆಯೋಜಕನಾಗಿ ಕಾರ್ಯನಿರ್ವಹಿಸಿದನು ಮತ್ತು ಆಲ್ಟೋ ಕಾರಿನಲ್ಲಿ ಶೂಟೌಟ್ ನಡೆದ ಸ್ವಲ್ಪ ಸಮಯದ ನಂತರ ಶೂಟರ್ ಗಳನ್ನು ಕರೆಸಿಕೊಂಡಿದ್ದನು” ಎಂದು ಅಧಿಕಾರಿ ಹೇಳಿದರು.

ಇಬ್ಬರು ಆರೋಪಿ ಶೂಟರ್ ಗಳನ್ನು ಬಂಧಿಸುವುದರ ಜೊತೆಗೆ, ಪೊಲೀಸರು ಅಪಾರ ಸಂಖ್ಯೆಯ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.

ಪ್ರಸ್ತುತ ಕಾಲದ ಅತ್ಯಂತ ಪ್ರಸಿದ್ಧ ಪಂಜಾಬಿ ಭಾಷಾ ಗಾಯಕರಲ್ಲಿ ಒಬ್ಬರಾದ 28 ವರ್ಷದ ಮುಸೆವಾಲಾ ಅವರನ್ನು ಮೇ 29 ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡಿಕ್ಕಿ ಕೊಲ್ಲಲಾಯಿತು ಮತ್ತು ಪಂಜಾಬ್ ನ ಮಾನಸ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಸುಮಾರು 8 ದಾಳಿಕೋರರು 30 ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದರು.

ಮಹೀಂದ್ರಾ ಥಾರ್ ಎಸ್ಯುವಿಯ ಡ್ರೈವಿಂಗ್ ಸೀಟಿನ ಮೇಲೆ ಸಿಧು ತನ್ನ ರಕ್ತದಲ್ಲಿ ನೆನೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಿನಲ್ಲಿದ್ದ ಮತ್ತಿಬ್ಬರು, ಸಿಧು ಅವರ ಸ್ನೇಹಿತರಾದ ಗುರ್ವಿಂದರ್ ಸಿಂಗ್ ಮತ್ತು ಗುರುಪ್ರೀತ್ ಸಿಂಗ್ ಅವರಿಗೂ ಗುಂಡು ತಗುಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು