ಹೊಸದಿಲ್ಲಿ: ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ಸುರಂಗದಲ್ಲಿ ಸಿಲುಕಿದ್ದ 41 ಮಂದಿಯಲ್ಲಿ 10 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ನಿಷೇಧಿತ “ರ್ಯಾಟ್-ಹೋಲ್” ಗಣಿಗಾರಿಕೆ ತಂತ್ರದ ಮೂಲಕ ಮೂವರನ್ನು ಹೊರತರಲಾಗಿದೆ. 17 ದಿನಗಳ ಬಳಿಕ ಮೂವರು ಕಾರ್ಮಿಕರು ಹೊರಬಂದಿದ್ದಾರೆ.
ಹೈಟೆಕ್ ಯಂತ್ರಗಳು, ಆಗರ್ಗಳು ಕಾರ್ಯಾಚರಣೆ ನಡೆಸಲು ವಿಫಲವಾದ ಬಳಿಕ ಇಲಿಬಿಲ ತಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ಹೊರತರುವ ಯೋಜನೆ ಪ್ರಗತಿಯಲ್ಲಿದೆ. ಎಲ್ಲ 41 ಮಂದಿಯನ್ನು ರಕ್ಷಿಸಲು ಸುಮಾರು ಎರಡರಿಂದ ಮೂರು ಗಂಟೆಗಳು ಬೇಕಾಗುತ್ತದೆ ಎನ್ನಲಾಗಿದೆ.
ಸಿಕ್ಕಿಬಿದ್ದ ಕಾರ್ಮಿಕರನ್ನು ಹೊರತರಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಥವಾ ಎನ್ಡಿಆರ್ಎಫ್ನ ಮೂರು ತಂಡಗಳು ಸುರಂಗದೊಳಗೆ ಕಾರ್ಯನಿರತವಾಗಿದೆ.