ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರು ಇಂದು(ಅ.20) ಸೇವೆಯಿಂದ ನಿವೃತ್ತಿಯಾದರು. 2019ರ ಸೆಪ್ಟೆಂಬರ್ 23ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದ ಭಟ್ ಅವರು, ನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ನ್ಯಾ. ಸಂಜಯ್ ಕೃಷ್ಣ ಕೌಲ್, ಭಟ್ ಅವರು ತಮ್ಮ ನಿಖರ ಮತ್ತು ಸಂಕ್ಷಿಪ್ತ ತೀರ್ಪುಗಳ ಮೂಲಕ ನ್ಯಾಯಾಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಸಾಂವಿಧಾನಿಕ ವಿಚಾರಗಳಲ್ಲಿ ಅವರು ಉತ್ತಮ ಕೊಡುಗೆ ಶ್ಲಾಘನೀಯವಾಗಿದೆ ಎಂದರು.
ಇನ್ನು ಅಕ್ಟೋಬರ್ 17ರಂದು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮತ್ತು ಅವರ ದತ್ತು ಸ್ವೀಕಾರದ ಹಕ್ಕನ್ನು ನಿರಾಕರಿಸಿದ ಸುಪ್ರೀಂಕೋರ್ಟ್ ಪೀಠದಲ್ಲಿ ನ್ಯಾಯಮೂರ್ತಿ ಭಟ್ ಅವರು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಪಿ.ಎಸ್.ನರಸಿಂಹ ಅವರ ಜತೆಗಿದ್ದರು. ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಈ ಹಕ್ಕುಗಳಿಗೆ ಅವಕಾಶ ನೀಡಲು ಒಲವು ವ್ಯಕ್ತಪಡಿಸಿದ್ದರು. ಭಟ್ ತಮ್ಮ ತೀರ್ಪಿನಲ್ಲಿ ಇದನ್ನು ನಿರಾಕರಿಸಿದ್ದರು ಹಾಗೂ ಇತರ ನ್ಯಾಯಮೂರ್ತಿಗಳ ತಾರ್ಕಿಕತೆಯನ್ನು ಟೀಕಿಸಿದ್ದರು.