ನವದೆಹಲಿ: ಜಾರಿ ನಿರ್ದೇಶನಾಲಯ ನೀಡಿದ ದೂರಿನ ಸಂಬಂಧ ಫೆ.೧೭ರಂದು ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ದೆಹಲಿ ನ್ಯಾಯಾಲಯ ಸಮನ್ಸ್ ನೀಡಿದೆ.
ಅಬಕಾರಿ ನೀತಿ ಜಾರಿಯ ವೇಳೆ ನಡೆದಿದೆ ಎನ್ನಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳು ನೀಡಿದ್ದ ಸಮನ್ಸ್ ಅನ್ನು ಐದು ಬಾರಿ ಪಾಲಿಸದ ಆರೋಪದಡಿ ಫೆ.೩ರಂದು ಪ್ರಕರಣ ದಾಖಲಾಗಿತ್ತು.
ತಮಗೆ ನೀಡಲಾಗಿರುವ ಸಮನ್ಸ್ ಕಾನೂನುಬಾಹಿರವೆಂದು ಆರೋಪಿಸಿದ ಕೇಜ್ರಿವಾಲ್ ಒಮ್ಮೆಯೂ ವಿಚಾರಣೆಗೆ ಹಾಜರಾಗಿರಲಿಲ್ಲ.