ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ನೀರಿನ ತೊಟ್ಟಿ ಶುಚಿಗೊಳಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಕಾಶಿ ವಿಶ್ವನಾಥ ದೇಗುಲ ಪಕ್ಕದ ಮಸೀದಿಯ ನೀರಿನ ತೊಟ್ಟಿಯಲ್ಲಿ ಕೆಲ ಮೀನುಗಳು ಸತ್ತಿದ್ದು, ಸ್ವತ್ಛಗೊಳಿಸಲು ಅನುಮತಿ ಕೋರಿ ಹಿಂದೂ ಮಹಿಳಾ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿ, ನೀರಿನ ತೊಟ್ಟಿ ಸ್ವತ್ಛಗೊಳಿಸುವುದು ತಮ್ಮ ಕರ್ತವ್ಯ ಎಂದು ಹೇಳಿತ್ತು. ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಲುಸ್ತುವಾರಿಯಲ್ಲಿ ನೀರಿನ ತೊಟ್ಟಿ ಶುಚಿಗೊಳಿಸಲು ಅನುಮತಿಯನ್ನು ನೀಡಿದೆ.