ಹೊಸದಿಲ್ಲಿ: ವಿಜ್ಞಾನವು ಕೇವಲ ಪರಿಹಾರಗಳು, ವಿಕಾಸ ಮತ್ತು ಆವಿಷ್ಕಾರಗಳ ತಳಹದಿ ಮಾತ್ರವಲ್ಲ, ಇಂದಿನ ನವ ಭಾರತವು ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್ ನೊಂದಿಗೆ ಮುನ್ನಡೆಯುತ್ತಿರುವ ಸ್ಫೂರ್ತಿಯೂ ಆಗಿದೆ ಎಂದು ಪ್ರಧಾನಿ ಶನಿವಾರ ಹೇಳಿದರು.
ಅಹ್ಮದಾಬಾದ್ ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶ’ವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ವಿಜ್ಞಾನವು 21 ನೇ ಶತಮಾನದ ಭಾರತದ ಅಭಿವೃದ್ಧಿಯಲ್ಲಿ ಶಕ್ತಿಯಂತೆ, ಅದು ಪ್ರತಿಯೊಂದು ಪ್ರದೇಶದ ಅಭಿವೃದ್ಧಿ ಮತ್ತು ಪ್ರತಿ ರಾಜ್ಯದ ಅಭಿವೃದ್ಧಿಯನ್ನು ವೇಗಗೊಳಿಸುವ ಶಕ್ತಿಯನ್ನು ಹೊಂದಿದೆ. ಇಂದು, ಭಾರತವು ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಮುನ್ನಡೆಸುವತ್ತ ಸಾಗುತ್ತಿರುವಾಗ, ಈ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತದ ವಿಜ್ಞಾನ ಮತ್ತು ಜನರ ಪಾತ್ರವು ಬಹಳ ಮುಖ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಆಡಳಿತ ಮತ್ತು ನೀತಿ ನಿರೂಪಣೆಯಲ್ಲಿ ಜನರ ಜವಾಬ್ದಾರಿ ಗಮನಾರ್ಹವಾಗಿ ಹೆಚ್ಚಾಗುತ್ತದೆ.”
ಕೇಂದ್ರ ಮತ್ತು ರಾಜ್ಯಗಳಿಗೆ ಸಹಾಯ ಮಾಡುವ ಇತಿಹಾಸದ ಪಾಠಗಳ ಬಗ್ಗೆ ಮಾತನಾಡಿದ ಅವರು, ಕಳೆದ ಶತಮಾನದ ಆರಂಭಿಕ ದಶಕಗಳಲ್ಲಿ, ಜಗತ್ತು ವಿನಾಶ ಮತ್ತು ದುರಂತದ ಅವಧಿಯನ್ನು ಎದುರಿಸುತ್ತಿದೆ ಎಂದು ಹೇಳಿದರು. ಆದರೆ ಆ ಯುಗದಲ್ಲೂ ಸಹ, ಅದು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಸಂಬಂಧಿಸಿರಲಿ, ಎಲ್ಲೆಡೆಯ ವಿಜ್ಞಾನಿಗಳು ತಮ್ಮ ಮಹಾನ್ ಆವಿಷ್ಕಾರದಲ್ಲಿ ನಿರತರಾಗಿದ್ದರು.
ಪಾಶ್ಚಿಮಾತ್ಯ ದೇಶಗಳಲ್ಲಿ, ಐನ್ ಸ್ಟೈನ್, ಫರ್ಮಿ, ಮ್ಯಾಕ್ಸ್ ಪ್ಲಾಂಕ್, ನೀಲ್ಸ್ ಬೋರ್ ಮತ್ತು ಟೆಸ್ಲಾ ಅವರಂತಹ ವಿಜ್ಞಾನಿಗಳು ತಮ್ಮ ಪ್ರಯೋಗಗಳಿಂದ ಜಗತ್ತನ್ನು ಬೆರಗುಗೊಳಿಸುತ್ತಿದ್ದರು. ಇದೇ ಅವಧಿಯಲ್ಲಿ, ಸಿ.ವಿ. ರಾಮನ್, ಜಗದೀಶ್ ಚಂದ್ರ ಬೋಸ್, ಸತ್ಯೇಂದ್ರನಾಥ ಬೋಸ್, ಮೇಘನಾದ್ ಸಹಾ ಮತ್ತು ಎಸ್. ಚಂದ್ರಶೇಖರ್ ಸೇರಿದಂತೆ ಅನೇಕ ವಿಜ್ಞಾನಿಗಳು ತಮ್ಮ ಹೊಸ ಆವಿಷ್ಕಾರಗಳನ್ನು ಮುನ್ನೆಲೆಗೆ ತರುತ್ತಿದ್ದರು. “ನಮ್ಮ ವಿಜ್ಞಾನಿಗಳ ಕೆಲಸ”ದಿಂದಾಗಿ ಸೂಕ್ತ ಮಾನ್ಯತೆ ದೊರೆತಿದೆ ಎಂಬ ಅಂಶವನ್ನು ಅವರು ಒತ್ತಿಹೇಳಿದರು.
ಸರ್ಕಾರವು ವಿಜ್ಞಾನ ಆಧಾರಿತ ಅಭಿವೃದ್ಧಿಯ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. “2014 ರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಸರ್ಕಾರದ ಪ್ರಯತ್ನಗಳಿಂದಾಗಿ, ಇಂದು ಭಾರತವು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 46 ನೇ ಸ್ಥಾನದಲ್ಲಿದೆ, ಆದರೆ 2015 ರಲ್ಲಿ, ಭಾರತವು 81 ನೇ ಸ್ಥಾನದಲ್ಲಿತ್ತು”, ಎಂದು ಪ್ರಧಾನಿ ಹೇಳಿದರು.
ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ‘ರಾಜ್ಯ-ಕೇಂದ್ರ ವಿಜ್ಞಾನ ಸಮಾವೇಶ’ವು ದೇಶದಲ್ಲಿ ವಿಜ್ಞಾನದ ಪ್ರಗತಿಗೆ ಹೊಸ ಆಯಾಮ ಮತ್ತು ಸಂಕಲ್ಪವನ್ನು ಸೇರಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವುದೇ ಅವಕಾಶಗಳು ಕೈತಪ್ಪಲು ಬಿಡಬಾರದು ಎಂದು ಪ್ರಧಾನಿ ಮನವಿ ಮಾಡಿದರು. “ಮುಂಬರುವ 25 ವರ್ಷಗಳು ಭಾರತಕ್ಕೆ ಅತ್ಯಂತ ಪ್ರಮುಖ ವರ್ಷಗಳು, ಏಕೆಂದರೆ ಇದು ಮುಂಬರುವ ಭಾರತದ ಹೊಸ ಅಸ್ಮಿತೆ ಮತ್ತು ಶಕ್ತಿಯನ್ನು ನಿರ್ಧರಿಸುತ್ತದೆ” ಎಂದು ಪ್ರಧಾನಿ ಹೇಳಿದರು.