ನವದೆಹಲಿ: ಬಿಹಾರದಲ್ಲಿ ‘ಮಹಾಮೈತ್ರಿ’ ಸರ್ಕಾರ ರಚನೆಯಾದ ನಂತರ ಇತ್ತೀಚೆಗೆ ನಡೆದ ಅಪರಾಧ ಘಟನೆಗಳನ್ನು ಉಲ್ಲೇಖಿಸಿದ ಬಿಜೆಪಿ, ರಾಜ್ಯದಲ್ಲಿ ‘ಜಂಗಲ್ ರಾಜ್’ ಮರಳಿ ಬಂದಿದೆ ಎಂದು ಶುಕ್ರವಾರ ಹೇಳಿದೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬಿತ್ ಪಾತ್ರಾ, ಜೆಡಿಯು ಮತ್ತು ಆರ್ ಜೆ ಡಿ ಎರಡೂ ಪಕ್ಷಗಳು ಸರ್ಕಾರ ರಚಿಸಲು ಕೈಜೋಡಿಸಿದ ನಂತರ ಪತ್ರಕರ್ತರು ಸೇರಿದಂತೆ ಹಲವಾರು ಜನರನ್ನು ಕೊಲ್ಲಲಾಗಿದೆ ಎಂದು ಹೇಳಿದರು.
ನಕಲಿ ಮದ್ಯದಿಂದಾಗಿ ಸಾವು, ಛಾಪ್ರಾದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಬಗ್ಗೆಯೂ ಪಾತ್ರಾ ಉಲ್ಲೇಖಿಸಿದರು.
‘ಜಂಗಲ್ ರಾಜ್’ ಬಿಹಾರಕ್ಕೆ ಮರಳುತ್ತದೆ ಎಂದು ಹೇಳುವುದು ತಪ್ಪಾಗಲಾರದು ಎಂದು ಪಾತ್ರಾ ಹೇಳಿದರು.
ರಾಜ್ಯದಲ್ಲಿನ ಎನ್ ಡಿ ಎ ಸರ್ಕಾರದಲ್ಲಿ ಬಿಜೆಪಿಯ ಉಪಸ್ಥಿತಿಯು ಪಕ್ಷವು ಗೃಹ ಅಥವಾ ಅಬಕಾರಿ ಇಲಾಖೆಗಳನ್ನು ಹೊಂದಿಲ್ಲದಿದ್ದರೂ ಅಪರಾಧದ ಮೇಲೆ ನಿಯಂತ್ರಣಾತ್ಮಕ ಪ್ರಭಾವವಾಗಿ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ.
10 ಲಕ್ಷ ಉದ್ಯೋಗಗಳನ್ನು ಒದಗಿಸುವ ತಮ್ಮ ಪಕ್ಷದ ಭರವಸೆಯ ಬಗ್ಗೆ ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಅವರ ಹೇಳಿಕೆಯ ಬಗ್ಗೆ ಪಾತ್ರಾ ವಾಗ್ದಾಳಿ ನಡೆಸಿದರು.
“10 ಲಕ್ಷ ಉದ್ಯೋಗದ ಭರವಸೆಯ ಬಗ್ಗೆ ಕೇಳಿದಾಗ ತೇಜಸ್ವಿ ಯಾದವ್ ಅವರು ತಾವು ಮುಖ್ಯಮಂತ್ರಿಯಲ್ಲ ಎಂದು ಹೇಳಿಕೊಂಡರು. ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಬಿಜೆಪಿ ವಕ್ತಾರರು ಆಗ್ರಹಿಸಿದ್ದಾರೆ.