ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಗೆ ಭೇಟಿ ನೀಡುವ ಗಣ್ಯರು ಮತ್ತು ಅತಿಥಿಗಳಿಂದ ದೇಶದ ವಾಸ್ತವವನ್ನು ಮರೆಮಾಚುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ ನಲ್ಲಿನ ಪೋಸ್ಟ್ನಲ್ಲಿ ಅವರು ಹೀಗೆ ಹೇಳಿದ್ದಾರೆ. “ಭಾರತ ಸರ್ಕಾರವು ನಮ್ಮ ಬಡ ಜನರನ್ನು ಮರೆಮಾಚುತ್ತಿದೆ. ನಮ್ಮ ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಮರೆಮಾಚುವ ಅಗತ್ಯವಿಲ್ಲ. ಜಿ 20 ಶೃಂಗಸಭೆಗೆ ಮುನ್ನ ಸಾರ್ವಜನಿಕ ವೀಕ್ಷಣೆಯಿಂದ ಮರೆಮಾಡಲಾಗಿರುವ ದೆಹಲಿಯ ವಸಂತ ವಿಹಾರ್ನಲ್ಲಿರುವ ಕೊಳೆಗೇರಿಯ ಕೂಲಿ ಕ್ಯಾಂಪ್ನ ವೀಡಿಯೊವನ್ನು ಕಾಂಗ್ರೆಸ್ ನಾಯಕ ರಾಹುಲ್ ಶನಿವಾರ ಮೈಕ್ರೋ ಬ್ಲಾಗಿಂಗ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ನಾವು ಮನುಷ್ಯರಲ್ಲವೇ? ಜಿ 20 ಶೃಂಗಸಭೆಗೆ ಮೊದಲು, ಮೋದಿ ಸರ್ಕಾರವು ತನ್ನ ವೈಫಲ್ಯವನ್ನು ಮರೆಮಾಡಲು ನಮ್ಮ ಮನೆಗಳನ್ನು ಪರದೆಗಳಿಂದ ಮುಚ್ಚಿದೆ ಎಂದು ದೆಹಲಿಯ ನಿವಾಸಿ ರಾಣಿ ಹೇಳಿರುವುದನ್ನು ರಾಹುಲ್ ನೆನಪಿಸಿಕೊಂಡಿದ್ದಾರೆ. ದೇಶದ ರಾಜನು ಬಡವರನ್ನು ದ್ವೇಷಿಸುತ್ತಾನೆ. ಸರ್ಕಾರವು ನಮ್ಮನ್ನು ಕೀಟಗಳು ಎಂದು ಪರಿಗಣಿಸುತ್ತದೆ ಎಂದು ರಾಹುಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ನಾಯಕರಿಗೆ ಆತಿಥ್ಯ ನೀಡಲು ದೆಹಲಿಯ ಬೀದಿ ನಾಯಿಗಳನ್ನು ಕ್ರೂರವಾಗಿ ಪಂಜರದಲ್ಲಿ ಎಸೆಯಲಾಗಿದೆ ಎಂದು ಶುಕ್ರವಾರ ಮತ್ತೊಂದು ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿತ್ತು.
सरकार हमें कीड़ा-मकोड़ा समझती है। हम इंसान नहीं हैं क्या?
– दिल्ली की रहने वाली रानी ये बात कहती हैं।
G20 से पहले मोदी सरकार ने अपनी नाकामी छिपाने के लिए इनके घरों को पर्दे से ढकवा दिया है।
क्योंकि राजा को गरीब से नफरत है। pic.twitter.com/kIKB2WP835
— Congress (@INCIndia) September 9, 2023