News Karnataka Kannada
Thursday, May 02 2024
ದೆಹಲಿ

ಮೋದಿ ಸರ್ಕಾರ ನಮ್ಮನ್ನು ಕೀಟಗಳೆಂದು ಪರಿಗಣಿಸಿದೆ: ರಾಹುಲ್ ಗಾಂಧಿ ವಾಗ್ದಾಳಿ

raga-introduces-a-new-member-of-the-family-by-giving-a-gift-to-her-mother
Photo Credit : IANS

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಗೆ ಭೇಟಿ ನೀಡುವ ಗಣ್ಯರು ಮತ್ತು ಅತಿಥಿಗಳಿಂದ ದೇಶದ ವಾಸ್ತವವನ್ನು ಮರೆಮಾಚುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ಅವರು ಹೀಗೆ ಹೇಳಿದ್ದಾರೆ. “ಭಾರತ ಸರ್ಕಾರವು ನಮ್ಮ ಬಡ ಜನರನ್ನು ಮರೆಮಾಚುತ್ತಿದೆ. ನಮ್ಮ ಅತಿಥಿಗಳಿಂದ ಭಾರತದ ವಾಸ್ತವತೆಯನ್ನು ಮರೆಮಾಚುವ ಅಗತ್ಯವಿಲ್ಲ.  ಜಿ 20 ಶೃಂಗಸಭೆಗೆ ಮುನ್ನ ಸಾರ್ವಜನಿಕ ವೀಕ್ಷಣೆಯಿಂದ ಮರೆಮಾಡಲಾಗಿರುವ ದೆಹಲಿಯ ವಸಂತ ವಿಹಾರ್‌ನಲ್ಲಿರುವ ಕೊಳೆಗೇರಿಯ ಕೂಲಿ ಕ್ಯಾಂಪ್‌ನ ವೀಡಿಯೊವನ್ನು ಕಾಂಗ್ರೆಸ್ ನಾಯಕ ರಾಹುಲ್‌ ಶನಿವಾರ ಮೈಕ್ರೋ ಬ್ಲಾಗಿಂಗ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ನಾವು ಮನುಷ್ಯರಲ್ಲವೇ? ಜಿ 20 ಶೃಂಗಸಭೆಗೆ ಮೊದಲು, ಮೋದಿ ಸರ್ಕಾರವು ತನ್ನ ವೈಫಲ್ಯವನ್ನು ಮರೆಮಾಡಲು ನಮ್ಮ ಮನೆಗಳನ್ನು ಪರದೆಗಳಿಂದ ಮುಚ್ಚಿದೆ ಎಂದು ದೆಹಲಿಯ ನಿವಾಸಿ ರಾಣಿ ಹೇಳಿರುವುದನ್ನು ರಾಹುಲ್‌ ನೆನಪಿಸಿಕೊಂಡಿದ್ದಾರೆ. ದೇಶದ ರಾಜನು ಬಡವರನ್ನು ದ್ವೇಷಿಸುತ್ತಾನೆ. ಸರ್ಕಾರವು ನಮ್ಮನ್ನು ಕೀಟಗಳು ಎಂದು ಪರಿಗಣಿಸುತ್ತದೆ ಎಂದು ರಾಹುಲ್‌ ಹೇಳಿದ್ದಾರೆ.

ಅಂತಾರಾಷ್ಟ್ರೀಯ ನಾಯಕರಿಗೆ ಆತಿಥ್ಯ ನೀಡಲು ದೆಹಲಿಯ ಬೀದಿ ನಾಯಿಗಳನ್ನು ಕ್ರೂರವಾಗಿ ಪಂಜರದಲ್ಲಿ ಎಸೆಯಲಾಗಿದೆ ಎಂದು ಶುಕ್ರವಾರ ಮತ್ತೊಂದು ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು