ನವದೆಹಲಿ: ‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನದ ಸಮಾರೋಪ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕರ್ತವ್ಯ ಪಥದಲ್ಲಿ ಅಮೃತ ಕಲಶಕ್ಕೆ ಮಣ್ಣನ್ನು ಅರ್ಪಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನವು ಭಾರತದ ಯುವಕರು ಹೇಗೆ ಒಂದಾಗಬಹುದು ಮತ್ತು ಪ್ರತಿಯೊಂದು ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ನೇರ ಉದಾಹರಣೆಯಾಗಿದೆ ಎಂದರು.
ದಂಡಿ ಯಾತ್ರೆಯು ಜನರನ್ನು ಒಟ್ಟುಗೂಡಿಸಿತು, ಅದೇ ರೀತಿ ಆಜಾದಿ ಕಾ ಅಮೃತ್ ಮಹೋತ್ಸವವು ಜನರ ಭಾಗವಹಿಸುವಿಕೆಯ ಪ್ರಮಾಣದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿತು ಎಂದಿದ್ದಾರೆ ಮೋದಿ. ಅಮೃತ ಕಲಶಕ್ಕೆ ಮಣ್ಣನ್ನು ಅರ್ಪಿಸುವ ಹಿಂದಿನ ಕಾರಣದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಅನೇಕ ಮಹಾನ್ ನಾಗರಿಕತೆಗಳು ಕೊನೆಗೊಂಡಿವೆ. ಆದರೆ ಪ್ರಾಚೀನ ಕಾಲದಿಂದ ಇಂದಿನವರೆಗೂ ಈ ದೇಶವನ್ನು ಉಳಿಸಿದ ಪ್ರಜ್ಞೆ ಭಾರತದ ಮಣ್ಣಿನಲ್ಲಿದೆ ಎಂದು ಹೇಳಿದರು.