News Karnataka Kannada
Sunday, April 28 2024
ದೆಹಲಿ

ಮದ್ಯ ಖರೀದಿಸಲು ಹಣ ನಿರಾಕರಿಸಿದ್ದಕ್ಕೆ ಅಜ್ಜ-ಅಜ್ಜಿಯನ್ನು ಕೊಂದ ಯುವಕ

ತನಗೆ ಇಷ್ಟವಾದ ಅಡುಗೆ ಮಾಡಲಿಲ್ಲ  ಅನ್ನೋ ಕಾರಣಕ್ಕೆ ಲಿವ್ ಇನ್ ಪಾರ್ಟನರ್ ಆಗಿದ್ದ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಹರಿಯಾಣದಲ್ಲಿ ನಡೆದಿದೆ.
Photo Credit :

ನವದೆಹಲಿ: ಮದ್ಯ ಖರೀದಿಸಲು ಹಣ ನೀಡದಕ್ಕೆ ಮೊಮ್ಮಗನೊಬ್ಬ ಅಜ್ಜ ಅಜ್ಜಿಯನ್ನು ಕೊಂದ ಘಟನೆ ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ದಮ್ರಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ದಮ್ರಿ ಗ್ರಾಮದ ಮನೆಯೊಂದರ ಎರಡು ಪ್ರತ್ಯೇಕ ಕೊಠಡಿಯಿಂದ ವೃದ್ಧ ದಂಪತಿಯ ಕೊಳೆತ ಶವಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮದ್ಯಕ್ಕಾಗಿ ನಡೆದ ವಾಗ್ವಾದದ ನಂತರ  ವೃದ್ಧ ದಂಪತಿಯನ್ನು ಕೊಂದು ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಪ್ರೇಮ್ ಶಂಕರ್ (65) ಮತ್ತು ಭವನ್ ದೇವಿ (60) ಎಂದು ಗುರುತಿಸಲಾಗಿದೆ.

“ಆರೋಪಿ ಹಿಮೇಶ್ (20) ಅಜ್ಜ-ಅಜ್ಜಿಯರೊಂದಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು  ಯುಪಿ ಹಳ್ಳಿಗೆ ಬಂದಿದ್ದಾನೆ. ಅವರು ದೆಹಲಿಯಲ್ಲಿ ವಾಸಿಸುತ್ತಿದ್ದರು. ಹಿಮೇಶ್ ತನ್ನ ಅಜ್ಜ-ಅಜ್ಜಿಯರನ್ನು ಕೊಂದಿದ್ದಾನೆ ಎಂದು ಆರೋಪಿಸಿ ಕುಟುಂಬವು ನಮಗೆ ದೂರು ನೀಡಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಈ ಸಂಬಂಧ ಕೊಲೆಯ ಎಫ್ಐಆರ್ ದಾಖಲಿಸಲಾಗಿದೆ. ಜೂನ್ 22 ರಂದು ಕೊಲೆ ನಡೆದಿದೆ ಎಂದು ಅಧಿಕಾರಿ ಹೇಳಿದರು, ಆದರೆ ಅದನ್ನು ಭಾನುವಾರ ಪೊಲೀಸರಿಗೆ ವರದಿ ಮಾಡಲಾಗಿದೆ..

ಆರೋಪಿಗಳು ತನ್ನ ಅಜ್ಜ-ಅಜ್ಜಿಯರನ್ನು ಕೊಂದು ಅವರ ದೇಹಗಳನ್ನು ಮನೆಯ ಎರಡು ಪ್ರತ್ಯೇಕ ಕೋಣೆಗಳಲ್ಲಿ ಬಚ್ಚಿಟ್ಟಿದ್ದಾರೆ  ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು