ದೆಹಲಿ: ಖಾಲ್ಸಾ ಏಡ್ ನ ಭಾರತದ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ನಿಂದ ಹಣವನ್ನು ಪಡೆದ ಆರೋಪ ಎದುರಿಸುತ್ತಿರುವ, ಯುಕೆ ಮೂಲದ ಸರ್ಕಾರೇತರ ಸಂಸ್ಥೆ ಖಾಲ್ಸಾ ಏಡ್ನ ಭಾರತ ಮುಖ್ಯಸ್ಥ ಅಮರ್ಪ್ರೀತ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪತ್ರವೊಂದು ಹರಿದಾಡುತ್ತಿದ್ದು, ಅದು ಖಾಲ್ಸಾ ಏಡ್ನಿಂದ ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ.
ಎನ್ಜಿಒ ರಚನೆಯಲ್ಲಿ ಸಾಂಸ್ಥಿಕ ಬದಲಾವಣೆಗಳು ಅಗತ್ಯವೆಂದು ಹೇಳುತ್ತದೆ. ಆಗಸ್ಟ್ನಲ್ಲಿ, ಭಯೋತ್ಪಾದನಾ ವಿರೋಧಿ ಸಂಸ್ಥೆ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಪಟಿಯಾಲದಲ್ಲಿರುವ ಖಾಲ್ಸಾ ಏಡ್ನ ಭಾರತದ ಪ್ರಧಾನ ಕಚೇರಿಯ ಆವರಣದ ಮೇಲೆ ದಾಳಿ ನಡೆಸಿತ್ತು. ಅಮರ್ಪ್ರೀತ್ ಸಿಂಗ್ ಮಾಲೀಕತ್ವದ ಕೆಲವು ದಾಖಲೆಗಳು ಮತ್ತು ಎರಡು ಮೊಬೈಲ್ ಫೋನ್ಗಳನ್ನು ಸಂಸ್ಥೆ ವಶಪಡಿಸಿಕೊಂಡಿದೆ. ಇನ್ನು ಈ ಕುರಿತು ಮತಷ್ಟು ತನಿಖೆ ನಡೆಯುತ್ತಿದೆ.