ನವದೆಹಲಿ: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ರಾಜ್ಯದನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಇದೀಗ ಪ್ರಕಟಿಸಿದ್ದು, ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ನಾಯಕರು ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಚಿಕ್ಕಬಳ್ಳಾಪುರದಿಂದ ಕೆ. ಸುಧಾಕರ್, ಉತ್ತರಕನ್ನಡದಿಂದ ವಿಶ್ವೇಶ್ವರ ಹೆಗೆಡೆ ಹಾಗೂ ರಾಯಚೂರಿನಿಂದ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್ ನೀಡಲಾಗಿದೆ.
ಆದರೆ ಈ ಬಾರಿ ಸತತ 7 ಅವಧಿಯಿಂದ ಅಭ್ಯರ್ಥಿಯಾಗಿದ್ದ ಅನಂತಕುಮಾರ ಹೆಗೆಡೆ ಅವರಿಗೆ ಎಂಟನೇ ಬಾರಿ ಸ್ಪರ್ಧಿಸುವ ಅವಕಾಶ ತಪ್ಪಿದೆ , ಬಿಜೆಪಿ ಟಿಕೇಟ್ ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರ ಕೈ ಸೇರಿದೆ. 28 ವರ್ಷಗಳಿಂದ ರಾಜಾಕಾರಣ ದಲ್ಲಿ ಸಕ್ರೀಯ ವಾಗಿದ್ದ ಇವರು ಮೊದಲ ಬಾರಿಗೆ ಲೋಕಸಭ ಅಖಾಡಕ್ಕಿಳಿಸಿದೆ. ಇವರು ವಿಧಾನಸಭೆ ಮಾಜಿ ಅಧ್ಯಕ್ಷರಾಗಿ, ರಾಜ್ಯ ಸಚಿವರಾಗಿ , ಶಿರಸಿ ಮತ್ತು ಅಂಕೋಲಾ ಕ್ಷೇತ್ರದಿಂದ ಶಾಸಕಾರಾಗಿದ್ದರು. ಕುತೂಹಲದಿಂದ ಕಾಯುತ್ತಿದ್ದ ಜಿಲ್ಲೆಯ ಜನರಿಗೆ ಭಾನುವಾರ ಸಿಹಿ ಸುದ್ಧಿ ನೀಡಿದೆ.