ನವದೆಹಲಿ: “ಭಯೋತ್ಪಾದನೆ ಇತರೆ ದೇಶಗಳ ಮೇಲೆ ಬೀರುತ್ತಿರುವ ಪರಿಣಾಮವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಮುಂದೊಂದು ದಿನ ದೊಡ್ಡ ಸಮಸ್ಯೆಯನ್ನೇ ಎದುರಿಸಬೇಕಾಗಬಹುದು” ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಮೂರು ವಾರಗಳನ್ನು ಕಳೆದಿದೆ.
ಈ ಯುದ್ಧದಲ್ಲಿ ಒಂಬತ್ತೂವರೆ ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹೋರಾಟದಲ್ಲಿ ಬಹುತೇಕ ರಾಷ್ಟ್ರಗಳು ಇಸ್ರೇಲ್ ಬೆಂಬಲಕ್ಕೆ ನಿಂತಿವೆ. ಅದೇ ಸಮಯದಲ್ಲಿ, ಮಾನವೀಯ ಆಧಾರದ ಮೇಲೆ ಇಬ್ಬರ ನಡುವೆ ಕದನ ವಿರಾಮವನ್ನು ತಕ್ಷಣವೇ ಜಾರಿಗೆ ತರಲು ಪ್ರಸ್ತಾವನೆಯನ್ನು ನೀಡಲಾಗಿದೆ. ನಾವು ಭಯೋತ್ಪಾದನೆ ಮೇಲೆ ಕಠಿಣ ನಿಲುವನ್ನು ತೆಗೆದುಕೊಳ್ಳದಿದ್ದರೆ ಮುಂದೊಂದು ದಿನ ನಾವೇ ಬಲಿಪಶುಗಳಾಗುತ್ತೇವೆ ಎಂದಿದ್ದಾರೆ.
ಭಯೋತ್ಪಾದನೆ ನಮ್ಮ ಮೇಲೆ ಪರಿಣಾಮ ಬೀರಿದಾಗ ಮಾತ್ರ ಗಂಭೀರ ವಿಷಯ ಎಂದು ಹೇಳಿದಾಗ ಭಾರತದ ಮೇಲೆ ಬೇರೆ ದೇಶಗಳಿಗಿರುವ ವಿಶ್ವಾಸಾರ್ಹತೆ ಕಡಿಮೆಯಾಗಬಹುದು ಹಾಗಾಗಿ ನಾವು ಸ್ಥಿರ ನಿಲುವು ಕಾಯ್ದುಕೊಳ್ಳಬೇಕು ಎಂದಿದ್ದಾರೆ.