ದೆಹಲಿ: ಸಚಿವ ರಾಜ್ಕುಮಾರ್ ಆನಂದ್ ಮನೆ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಇಂದು(ನ.02)ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಸಚಿವ ರಾಜ್ಕುಮಾರ್ ಆನಂದ್ ಅವರ ಮನೆ ಮೇಲೆ ದಾಳಿ ನಡೆದಿದೆ.
ದೆಹಲಿ ಸರ್ಕಾರದ ಹೆಚ್ಚಿನ ಸಚಿವರ ಮೇಲೆ ಇಡಿ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.ಇಡಿ ತಂಡ ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಸಚಿವ ರಾಜ್ಕುಮಾರ್ ಆನಂದ್ ಅವರ ಮನೆಗೆ ತಲುಪಿದೆ. ಸಿವಿಲ್ ಲೈನ್ಸ್ನಲ್ಲಿರುವ ಸಚಿವರ ಅಧಿಕೃತ ನಿವಾಸದಲ್ಲಿ ಇಡಿ ಶೋಧ ಕಾರ್ಯ ನಡೆಯುತ್ತಿದೆ. ಮೂಲಗಳ ಪ್ರಕಾರ, ರಾಜ್ಕುಮಾರ್ ಆನಂದ್ ಅವರಿಗೆ ಸೇರಿದ 8 ರಿಂದ 9 ಸ್ಥಳಗಳಲ್ಲಿ ಹುಡುಕಾಟ ನಡೆಯುತ್ತಿದೆ.