ನವದೆಹಲಿ: ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ನಂಬಿರುದು ನಾವು ಮಾಡುತ್ತಿರುವ ತಪ್ಪು, ಹಾಗು ಇದನ್ನು ಸಾಧಿಸಲು ಹಲವು ವರ್ಷಗಳ ಪರಿಶ್ರಮದ ಅಗತ್ಯವಿದೆ ಎಂದು ಆರ್.ಬಿ.ಐ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಸಂದರ್ಶನವೊಂದರಲ್ಲಿ ಹೇಳಿದ್ದು, ಇದಕ್ಕೆ ಅರ್ಥಶಾಸ್ತ್ರಜ್ಞರಿಂದ ಖಂಡನೆ ವ್ಯಕ್ತವಾಗಿದೆ.
ಉದ್ಯೋಗಿಗಳ ಕಳಪೆ ಕೌಶಲ್ಯ ಹಾಗು ಕಳಪೆ ಶಿಕ್ಷಣಗಳಂತಹ ಕ್ಷೇತ್ರಗಳಲ್ಲಿ ಅಗತ್ಯ ಸುಧಾರಣೆ ತರುವತ್ತ ಗಮನ ಹರಿಸಬೇಕು ಎಂದ ರಾಜನ್, ೨೦೨೪ರ ಲೋಕಸಭಾ ಚುನಾವಣೆಯ ನಂತರ ಅಧಿಕಾರಕ್ಕೆ ಬರುವ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸಬೇಕು ಎಂದಿದ್ದಾರೆ.
ರಾಜನ್ರ ಈ ಹೇಳಿಕೆಗೆ ಕೆಲ ಆರ್ಥಿಕ ತಜ್ಞರಿಂದ ಟೀಕೆಗಳು ಕೇಳಿಬಂದಿದ್ದು, ಇದು ಸತ್ಯವಲ್ಲ ಎಂದಿದ್ದಾರೆ.
ʼಶಾಲೆ ಬಿಡುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಕಾಲೇಜುಗಳ ದಾಖಲಾತಿ ಪ್ರಮಾಣ ಏರಿಕೆಯಾಗಿದೆ. ಅನೇಕ ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆʼ ಎಂದ ಮಣಿಪಾಲ್ ಗ್ಲೋಬಲ್ ಎಜುಕೇಷನ್ನ ಚೇರ್ಪರ್ಸನ್ ಮೋಹನದಾಸ ಪೈ, ರಾಜನ್ರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.