ನವದೆಹಲಿ: ಆಗ್ನೇಯ ದೆಹಲಿಯ ಸರೈ ಕಾಲೆ ಖಾನ್ ಬಳಿ ನಡೆದ 18 ವರ್ಷದ ಯುವಕನನ್ನು ಕೊಂದ ಆರೋಪದ ಮೇಲೆ 31 ವರ್ಷದ ಟ್ಯಾಕ್ಸಿ ಚಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಆರೋಪಿಯನ್ನು ಪ್ರಗತಿ ವಿಹಾರ್ನ ಖೋಡಾ ಕಾಲೋನಿ ನಿವಾಸಿ ರೂಪೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತ ಯುವಕನನ್ನು ಆಕಾಶ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಗುರುವಾರ ಸಂಜೆ ಈ ದುರಂತ ಘಟನೆ ನಡೆದಿದ್ದು, ಪಿಸಿಆರ್ ಕರೆ ಮೂಲಕ ಈ ಘಟನೆ ಪೊಲೀಸರಿಗೆ ತಿಳಿದುಬಂದಿದೆ.