ನವದೆಹಲಿ: ಹೊಸ ಸಂಸತ್ತಿನಲ್ಲಿ ಇಂದು ವಿಶೇಷ ಅಧಿವೇಶನ ನಡೆಯಲಿದೆ. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಅದಕ್ಕಿಂತ ಮುಂಚಿತವಾಗಿ ಸಂಸತ್ ಸದಸ್ಯರ ಗ್ರೂಪ್ ಫೋಟೋ ಸೆಷನ್ ವೇಳೆ ಬಿಜೆಪಿ ಸಂಸದ ನರಹರಿ ಅಮೀನ್ ಮೂರ್ಛೆ ಹೋದ ಘಟನೆ ನಡೆದಿದೆ. ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂದ ಹಾಗೇ ಸಂಸತ್ತಿನ ಅಂಗಳದಲ್ಲಿ ನಡೆದ ಗ್ರೂಪ್ ಫೋಟೋ ಸೆಷನ್ ನಲ್ಲಿ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಭಾಗವಹಿಸಿದ್ದರು.
ಹೊಸ ಸಂಸತ್ ಕಟ್ಟಡದಲ್ಲಿ ಇಂದು ವಿಶೇಷ ಅಧಿವೇಶನ ನಡೆಯಲಿದೆ. ಈ ಪ್ರಕ್ರಿಯೆಯು ಅಂತಿಮವಾಗಿ ಹೊಸ ಸಂಸತ್ತಿಗೆ ಸ್ಥಳಾಂತರಗೊಳ್ಳುತ್ತದೆ, ಅಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಾರ್ಯಕಲಾಪಗಳನ್ನು ನಡೆಸುತ್ತವೆ.
#Delhi: BJP MP Narhari Amin Fainted During Joint Group Photograph Of Members Of Rajya Sabha & Lok Sabha At Old Parliament Building #ParliamentSession #Parliament #NarhariAmin #RajyaSabha #OldParliamentBuilding #GroupPhotograph #Breaking #Sansad #Bharat #India pic.twitter.com/cgWlatrZhj
— Nitesh rathore (@niteshr813) September 19, 2023