News Karnataka Kannada
Tuesday, May 07 2024
ದೆಹಲಿ

ಅಡ್ಡಿಗಳ ನಡುವೆಯೂ ಅರಳಿದ ಚಂದ್ರಿಕಾ; ವಡಾಪಾವ್ ಹುಡುಗಿಗೆ ಅಧಿಕಾರಿಗಳ ಕಾಟ

ಅಧಿಕಾರಿಗಳಿಗೆ 30,000 ರಿಂದ 35 ಸಾವಿರ ರೂಪಾಯಿ ಹಣವನ್ನು ಪಾವತಿಸಿದರೂ ಹಣದ ಆಸೆಗೆ ಮತ್ತೊಮ್ಮೆ ನನ್ನನ್ನು ಪೀಡಿಸುತ್ತಿದ್ದಾರೆ. ಜೊತೆಗೆ ಸ್ಟಾಲ್ ಅನ್ನು ಎತ್ತಂಗಡಿ ಮಾಡಿಸುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದಾರೆ ಎಂದು ಚಂದ್ರಿಕಾ ತಮ್ಮ ನೋವನ್ನು ತೋಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.
Photo Credit : News Kannada

ನವದೆಹಲಿ: ಪೀತಂಪುರದಲ್ಲಿ ವಡಾ ಪಾವ್ ಮಾರಾಟ ಮಾಡುತ್ತಿರುವ ಚಂದ್ರಿಕಾ ದೀಕ್ಷಿತ್ ಗೆರಾ ಅವರನ್ನು ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಸ್ಟಾಲ್ ತೆರವುಗೊಳಿಸುವಂತೆ ಪೀಡಿಸುತ್ತಿದ್ದಾರೆ.

ಅಧಿಕಾರಿಗಳಿಗೆ 30,000 ರಿಂದ 35 ಸಾವಿರ ರೂಪಾಯಿ ಹಣವನ್ನು ಪಾವತಿಸಿದರೂ ಹಣದ ಆಸೆಗೆ ಮತ್ತೊಮ್ಮೆ ನನ್ನನ್ನು ಪೀಡಿಸುತ್ತಿದ್ದಾರೆ. ಜೊತೆಗೆ ಸ್ಟಾಲ್ ಅನ್ನು ಎತ್ತಂಗಡಿ ಮಾಡಿಸುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದಾರೆ ಎಂದು ಚಂದ್ರಿಕಾ ತಮ್ಮ ನೋವನ್ನು ತೋಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡ ಚಂದ್ರಿಕಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಕೆಲ ವರ್ಷಗಳ ಕಾಲ ಹಲ್ದಿರಾಮ್ ಅಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಪತಿಯ ಬೆಂಬಲದೊಂದಿಗೆ ಪೀತಂಪುರದಲ್ಲಿ ವಡಾ ಪಾವ್ ಸ್ಟಾಲ್ ತೆರೆದು ಸಣ್ಣ ಉದ್ಯಮ ಪ್ರಾರಂಭಿಸಿದರು.

ಇದೀಗ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಸ್ಟಾಲ್‌ ತೆರವು ಮಾಡುವಂತೆ ಹೇಳುತ್ತಿದ್ದರೂ ಬಗ್ಗದ ಚಂದ್ರಿಕಾ, ತಮ್ಮದೇ ಆದ ಸ್ವಂತ ಡಾಭಾ ಅಥವಾ ರೆಸ್ಟೋರೆಂಟ್ ಅನ್ನು ಆರಂಭಿಸುವ ಆಸೆ ಹೊಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು