ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ರಣಭೀಕರ ಮಳೆಯಿಂದ 20 ಕ್ಕೂ ಅಧಿಕ ಮಂದಿ ಸಾವನಪ್ಪಿರುವುದಾಗಿ ವರದಿಗಳು ಹೇಳಿವೆ.
ಹಲವಾರು ಮನೆ, ಕಾರುಗಳು ಭೀಕರ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಒಮ್ಮಿಂದೊಮ್ಮೆಲೆ ನೀರಿನ ಪ್ರವಾಹ ಮನೆ, ಕಟ್ಟಡಗಳು, ಕಾರುಗಳನ್ನು ತನ್ನೊಂದಿಗೆ ಹೊತ್ತೊಯ್ದಿದ್ದು, ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿ ಹಾನಿಗೆ ಒಳಗಾಗಿದೆ. ಜನರು 24 ಗಂಟೆಗಳ ಕಾಲ ಮನೆಯಿಂದ ಹೊರಬರದಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ದಳದ ಸದಸ್ಯರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಜನರ ಶ್ಲಾಘನೆಗೆ ಪಾತ್ರ ರಾಗಿದ್ದಾರೆ.