ದೆಹಲಿ: ಕಳೆದ ಕೆಲ ದಿನಗಳಿಂದ ಹದಗೆಡುತ್ತಲೇ ಸಾಗಿರುವ ದೆಹಲಿಯ ಉಸಿರಾಡುವ ಗಾಳಿಯ ಗುಣಮಟ್ಟಇಂದು ಸಹ ತನ್ನ ಕಳಪೆ ಪ್ರದರ್ಶನ ಮುಂದುವರೆಸಿದೆ. ದೆಹಲಿ ಜೊತೆಗೆ ಮುಂಬೈನಲ್ಲ ಸಹ ವಾಯುಮಾಲಿನ್ಯ ಏಕ್ದಂ ಹೆಚ್ಚಳವಾಗಿದ್ದು, ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ಸುಡುವುದೇ ಇದಕ್ಕೆ ಕಾರಣವೆನ್ನಲಾಗಿದೆ. ಇದು ಆರೋಗ್ಯಕ್ಕೆ ವಿಷವಾಗಿ ಪರಿಣಾಮಿಸುತ್ತಿದೆ.
ದೆಹಲಿ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿದ್ದು, ಸರ್ಕಾರ ಕೈಗೊಳ್ಳುತ್ತಿರುವ ಯಾವ ಕ್ರಮಗಳೂ ಸಹ ಪರಿಣಾಮ ಬೀರುತ್ತಿಲ್ಲ. ಅಲ್ಲಲ್ಲಿ ವಾಯು ಶುದ್ದೀಕರಣ ಘಟಕಗಳ ನಿರ್ಮಾಣ, ರಸ್ತೆ ಬದಿಯಲ್ಲಿರುವ ಮರಗಳಿಗೆ ನೀರು ಸಿಂಪಡಣೆ ಸೇರಿದಂತೆ ವಾಯುಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ದೆಹಲಿ ಸರ್ಕಾರ ಹರಸಾಹಸ ಪಡುತ್ತಿದೆ. ಸುರಕ್ಷಿತ ಉಸಿರಾಡುವ ಗಾಳಿಯ ಗುಣಮಟ್ಟ ಎಂಟು ಪಟ್ಟು ಕಲುಷಿತಗೊಂಡಿದ್ದು ಎಕ್ಯುಐ ನಲ್ಲಿ ದಾಖಲಾಗಿದೆ.