ನವದೆಹಲಿ: ಚುನಾವಣೆಯಲ್ಲಿ ಅಕ್ರಮ ಹಾಗು ಸರ್ಕಾರದ ಭ್ರಷ್ಟಾಚಾರದ ಕಾರಣಕ್ಕೆ ಪರಸ್ಪರರ ವಿರುದ್ಧ ದೆಹಲಿಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿಯ ೨೦೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದಾಗಿ ಪೋಲಿಸ್ ಅಧಿಕಾರಿ ಮಾಹಿತಿ ನೀಡಿದಾರೆ.
ಚಂಢಿಗಢ ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದಿದೆ ಎಂದು ಆರೋಪಿಸಿದ ಎಎಪಿ, ಬಿಜೆಪಿ ಪ್ರಧಾನ ಕಚೇರಿಯ ಎದುರು ಪ್ರತಿಭಟಿಸಿದರೆ, ಭ್ರಷ್ಟ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಎಎಪಿ ಕೆಂದ್ರ ಕಚೇರಿಯೆದುರು ಜಮಾಯಿಸಿದ್ದರು ಎಂದು ಬಿಜೆಪಿ ಹೇಳಿದೆ.
ಸುಮಾರು ೧೫೦ ಎಎಪಿ ಕಾರ್ಯಕರ್ತರು ಹಾಗು ಬಿಜೆಪಿಯ ೬೦ ಕಾರ್ಯಕರ್ತರನ್ನು ಬಂಧಿಸಿ ಬಸ್ ಗಳಲ್ಲಿ ಪ್ರತ್ಯೇಕ ಠಾಣೆಗಳಿಗೆ ಕರೆದೊಯ್ದು, ಕೆಲ ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ.