2017ರಲ್ಲಿ ರಾಜ್ಯಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರೂ ದೆಹಲಿಯಲ್ಲಿ ಸರ್ಕಾರಿ ಬಂಗಲೆ ತೊರೆಯದ ಜನತಾ ದಳ (ಯುನೈಟೆಡ್) ಮಾಜಿ ಅಧ್ಯಕ್ಷ ಶರದ್ ಯಾದವ್ ಅವರಿಗೆ ಬಿಸಿಮುಟ್ಟಿಸಿರುವ ದೆಹಲಿ ಹೈಕೋರ್ಟ್, ಇನ್ನು15 ದಿನಗಳೊಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ದೆಹಲು ಹೈಕೋರ್ಟ್ ನಿರ್ದೇಶನ ನೀಡಿದೆ.
ಶರದ್ ಯಾದವ್ ರಾಜ್ಯಸಭೆಯಿಂದ ಅನರ್ಹಗೊಂಡು ನಾಲ್ಕು ವರ್ಷಗಳೇ ಕಳೆದರೂ ಇನ್ನೂ ಸರ್ಕಾರಿ ವಸತಿಗಳನ್ನು ಉಳಿಸಿಕೊಂಡಿರುವುದು ತಪ್ಪು.
ಈ ಕುರಿತು ಯಾವುದೇ ಸಮರ್ಥನೆಗಳು ಬೇಕಿಲ್ಲ. ಈ ಕೂಡಲೇ ಬಂಗಲೆಯನ್ನು ತೊರೆಯಬೇಕು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ಪೀಠ ಆದೇಶ ನೀಡಿದೆ. ಬಂಗಲೆಯನ್ನು 15 ದಿನಗಳಲ್ಲಿ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಸೂಚಿಸಿದೆ.