ನವದೆಹಲಿ : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ದಿಢೀರ್ ಬುಲಾವ್ ಬಂದ ಹಿನ್ನೆಲೆ ನವದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಈಗ ಜಾಲಿ ಮೂಡ್ನಲ್ಲಿದ್ದಾರೆ.
ನಿನ್ನೆ ಸೋನಿಯಾಗಾಂಧಿಯವರನ್ನ ಭೇಟಿಯಾದ ಸಿದ್ದರಾಮಯ್ಯ ಅವರು ಕೆಲ ಮಹತ್ವದ ರಾಜಕೀಯ ಬಗ್ಗೆ ಚರ್ಚಿಸಿದ್ದಾರೆ. ಇದಾದ ಬಳಿಕ ಇಂದು ಸಿದ್ದರಾಮಯ್ಯ ಅವರು ದೆಹಲಿ ರೌಂಡ್ ಹೊಡೆದಿದ್ದಾರೆ.
ರಾಜಕೀಯ ಜಂಜಾಟವನ್ನು ಬಿಟ್ಟು ಜಾಲಿ ಮೂಡ್ನಲ್ಲಿ ಶಾಪಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ದೆಹಲಿಯ ಜನಪ್ರಿಯ ಸ್ಥಳ ಕಾನಾಟ್ ಪ್ಲೇಸ್ನಲ್ಲಿ ಶಾಪಿಂಗ್ ಮಾಡಿ ಸುತ್ತಾಡಿದ್ದಾರೆ. ಅಲ್ಲದೇ ಕಾನಾಟ್ ಪ್ಲೇಸ್ನ ಕಾಫಿ ಶಾಪ್ನಲ್ಲಿ ಕೆಲ ಹೊತ್ತು ಸಿದ್ದರಾಮಯ್ಯ ಕಾಲ ಕಳೆದಿದ್ದಾರೆ.
ಈ ವೇಳೆ ಸಿದ್ದರಾಮಯ್ಯಗೆ ಶಾಸಕ ಜಮೀರ್ ಅಹಮದ್ ಖಾನ್, ಪ್ರಕಾಶ್ ರಾಠೋಡ್, ಐವನ್ ಡಿಸೋಜಾ, ಅಶೋಕ್ ಪಟ್ಟಣ್ ಸಾಥ್ ನೀಡಿದ್ದಾರೆ.