News Karnataka Kannada
Saturday, May 04 2024
ದೆಹಲಿ

ಬುದ್ಧ ಪೂರ್ಣಿಮಾ ಆಚರಣೆ: ಪ್ರಧಾನಿ ಮೋದಿಗೆ ಬೌದ್ಧ ಸನ್ಯಾಸಿಗಳಿಂದ ಕೃತಜ್ಞತೆ

PM's programme on May 5: Changes in vehicular traffic
Photo Credit : Twitter

ದೆಹಲಿ: ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡಿದ್ದಕ್ಕೆ ಹಾಗೂ ಬುದ್ಧ ಪೂರ್ಣಿಮಾ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಬೌದ್ಧ ಸನ್ಯಾಸಿಗಳು ಮತ್ತು ಮುಖ್ಯ ಪೀಠಾಧಿಪತಿಗಳು ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಶ್ರೀಲಂಕಾದ ಧರ್ಮ, ಸಂಸ್ಕೃತಿ, ಸಂಪ್ರದಾಯ ಮತ್ತು ನಾಗರಿಕತೆಯನ್ನು ಭಾರತ ವಾರಸತ್ವದಿಂದ ಪಡೆದಿದ್ದಾಗಿದೆ. ಈ ಸಂಬಂಧ ಮತ್ತು ಸಹೋದರತ್ವದ ಬಲ ಶಕ್ತಿಯಾಗಿ ಬೆಳೆಯಬೇಕು. ಬೌದ್ಧ ತಾತ್ವಿಕ ಪರಿಕಲ್ಪನೆಗಳು ಎಲ್ಲಾ ಸಮಯದಲ್ಲೂ ಇಡೀ ಜಗತ್ತಿಗೆ ಸರಿಯಾಗಿವೆ ಮತ್ತು ಅತ್ಯಂತ ಸೂಕ್ತವಾಗಿವೆ ಎಂದಿದ್ದಾರೆ. ಮತ್ತು ಮಹಾ ಸಂಘವು ಪ್ರಧಾನ ಮಂತ್ರಿಯಿಂದ ಅಪಾರವಾಗಿ ಪ್ರಭಾವಿತವಾಗಿದ್ದು, ಬೌದ್ಧ ಧರ್ಮದ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆ ಮತ್ತು ಉತ್ಸಾಹ ಅಮೋಘವಾದದ್ದು ಎಂದು ಮುಖ್ಯ ಪೀಠಾಧಿಪತಿಗಳ ಸಂದೇಶವನ್ನು ಅಲ್ಲಿನ ಸತಿಪತ್ತಾನ ನಿಯತಕಾಲಿಕೆ ಉಲ್ಲೇಖಿಸಿದೆ.

ಮೇ 16 ರಂದು ಬುದ್ಧ ಪೂರ್ಣಿಮಾ ದಿನವನ್ನು ಅದ್ದೂರಿಯಾಗಿ ಆಚರಿಸಿದ್ದಕ್ಕಾಗಿ ಭಾರತ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ (ಐಬಿಸಿ)ಕ್ಕೆ ಮಹಾಸಂಘದ ಪರವಾಗಿ ಪೀಠಾಧಿಪತಿಗಳು ಕೃತಜ್ಞತೆಯನ್ನು ಸಲ್ಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು