ಕೋಲ್ಕತಾ : ಪಾನಮತ್ತ ಬೈಕ್ ಸವಾರನೊಬ್ಬ ಚಿತ್ರೀಕರಣ ನಡೆಯುತ್ತಿರುವ ಸೆಟ್ಗೆ ನುಗ್ಗಿದ ಪರಿಣಾಮ ಬಂಗಾಳದ ಖ್ಯಾತ ನಟರಾದ ಅರ್ಜುನ್ ಚಕ್ರವರ್ತಿ ಮತ್ತು ಪ್ರಿಯಾಂಕಾ ಸರ್ಕಾರ್ ಗಾಯಗೊಂಡಿದ್ದಾರೆ.ನಟನ ಪ್ರಕಾರ, ಅವರು ಬೈಕ್ನಲ್ಲಿ ಕುಳಿತು ಮುಂದಿನ ಶಾಟ್ಗೆ ತಯಾರಾಗುತ್ತಿದ್ದರು, ಕೊನೆಯ ದಿನವಾದ ಚಿತ್ರೀಕರಣದ ಕಾರಣ ಪ್ಯಾಕ್ ಅಪ್ ಮಾಡಲು ಬಹುತೇಕ ಸಿದ್ಧರಾಗಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ಏಕಾಏಕಿ ಸೆಟ್ಗೆ ನುಗ್ಗಿ ನಟರಿಗೆ ಅತಿವೇಗವಾಗಿ ಗುದ್ದಿದೆ.
ಶುಕ್ರವಾರ ತಡ ರಾತ್ರಿ ಈ ಘಟನೆ ನಡೆದಿದ್ದು, ಛಾಯಾಗ್ರಾಹಕ-ನಿರ್ದೇಶಕರಾಗಿರುವ ಸೌಮಿಕ್ ಹಲ್ದರ್ ನಿರ್ದೇಶಿಸುತ್ತಿರುವ ‘ಮಹಾಬಾಹರತ್ ಮರ್ಡರ್’ ಮೊದಲ ಸೀಸನ್ಗಾಗಿ ಈ ಜೋಡಿಯು ಚಿತ್ರೀಕರಣ ನಡೆಸುತ್ತಿತ್ತು, ಈ ವೇಳೆ ಘಟನೆ ನಡೆದಿದೆ.
ನಟಿ ಪ್ರಿಯಾಂಕಾ ಸರ್ಕಾರ್ ತೀವ್ರವಾಗಿ ಗಾಯಗೊಂಡಿದ್ದು, ಅವರ ಬಲ ಕಾಲು ಮುರಿತವಾಗಿದೆ ಮತ್ತು ಚಕ್ರವರ್ತಿ ಅವರಿಗೆ ಸಣ್ಣ ಗಾಯಗಳಾಗಿವೆ.
ಘಟನೆಗೆ ಕಾರಣನಾದ ಬೈಕ್ ಸವಾರನನ್ನು ಬಂಧಿಸಿ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.