News Karnataka Kannada
Wednesday, May 01 2024
ದೆಹಲಿ

ಪರೀಕ್ಷೆಗೆ ಗೈರಾದರೆ ಮತ್ತೊಂದು ಅವಕಾಶವಿಲ್ಲ:ಯುಪಿಎಸ್‌ಸಿ

Supreme Court
Photo Credit :

ಹೊಸದಿಲ್ಲಿ: ನಿರ್ದಿಷ್ಟ ಪರೀಕ್ಷೆಗೆ ಗೈರಾಗುವ ವಿದ್ಯಾರ್ಥಿಗಾಗಿ ಪ್ರತ್ಯೇಕವಾಗಿ ಪರೀಕ್ಷೆ ನಡೆಸುವ ನಿಯಮಗಳು ಯಾವುದು ನಮ್ಮಲ್ಲಿಲ್ಲ.

ವಿದ್ಯಾರ್ಥಿಗೆ ಅನಾರೋಗ್ಯ ಅಥವಾ ಅಪಘಾತವಾಗಿದ್ದರಿಂದ ಪರೀಕ್ಷೆಗೆ ಗೈರಾದರೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಆದರೆ ಕೊರೊನಾ ಕಾರಣಕ್ಕೆ ಗೈರಾದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇತ್ಯಾದಿ ಅವಕಾಶ ಕಲ್ಪಿಸುವ ಹೊಣೆ ಕೇಂದ್ರ ಸಿಬಂದಿ ಹಾಗೂ ತರಬೇತಿ ಇಲಾಖೆಯದ್ದಾಗಿದೆ ಎಂದು ಅಫಿದಾವಿತ್‌ನಲ್ಲಿ ಯುಪಿಎಸ್‌ಸಿ ತಿಳಿಸಿದೆ.

2021ರ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮೂವರು ವಿದ್ಯಾರ್ಥಿಗಳು, ಕೊರೊನಾ ಪಾಸಿಟಿವ್‌ ಆಗಿದ್ದರಿಂದ ಅನಂತರ ನಡೆದ ಮುಖ್ಯ ಪರೀಕ್ಷೆಗೆ ಗೈರಾಗಿದ್ದರು. ಹಾಗಾಗಿ ಅವರು ತಮಗೆ ಮತ್ತೊಂದು ಅವಕಾಶ ಕಲ್ಪಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಯುಪಿಎಸ್‌ಸಿಗೆ ತನ್ನ ಅಹವಾಲು ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಅಫಿದಾವಿತ್‌ ಸಲ್ಲಿಸಿರುವ ಯುಪಿಎಸ್‌ಸಿ, ಮೇಲಿನಂತೆ ತಿಳಿಸಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು