News Karnataka Kannada
Saturday, May 04 2024
ದೆಹಲಿ

ದೇಶದಲ್ಲಿ ಜನಕೇಂದ್ರಿತ ತಂತ್ರದಿಂದ ಕೊರೊನಾ ನಿಯಂತ್ರಣ ತಂದಿದ್ದೇವೆ: ಪ್ರಧಾನಿ ಮೋದಿ

Modi
Photo Credit :

ಹೊಸದಿಲ್ಲಿ: “ಕೊರೊನಾ ಸೋಂಕು ವಿಶ್ವದ ಜನಜೀವನಕ್ಕೆ ಅಡ್ಡಿ ಮಾಡುತ್ತಲೇ ಸಾಗುತ್ತಿದೆ. ಭಾರತದಲ್ಲಿ ಜನಕೇಂದ್ರಿತ ತಂತ್ರ ಬಳಸಿಕೊಂಡು ಸಾಂಕ್ರಾಮಿಕವನ್ನು ನಿಯಂತ್ರ ಣಕ್ಕೆ ತಂದಿದ್ದೇವೆ’ ಎಂದು ಪ್ರಧಾನಿ ಮೋದಿ ಗುರುವಾರ ನಡೆದ 2ನೇ ಜಾಗತಿಕ ಕೊರೊನಾ ಶೃಂಗಸಭೆಯಲ್ಲಿ ತಿಳಿಸಿದ್ದಾರೆ.

“ಭಾರತವು ವಿಶ್ವದಲ್ಲೇ ದೊಡ್ಡ ಲಸಿಕೆ ಅಭಿಯಾನ ನಡೆಸಿದೆ. ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಪೂರಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಂಪ್ರದಾಯಿಕ ಔಷಧಗಳನ್ನು ಬಳಸಿದ್ದೇವೆೆ. ವಿಶ್ವದಲ್ಲಿ ಹೆಚ್ಚು ಸ್ಥಿತಿಸ್ಥಾಪಕ ಆರೋಗ್ಯ ಭದ್ರತಾ ವ್ಯವಸ್ಥೆ ನಿರ್ಮಾಣವಾಗಬೇಕೆಂದರೆ ಡಬ್ಲ್ಯುಎಚ್‌ಒ ಸುಧಾರಿ ಸಬೇಕು, ಇನ್ನಷ್ಟು ಬಲಿಷ್ಠವಾಗಬೇಕು. ಈ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳಲು ಭಾರತ ಸಿದ್ಧವಿದೆ ಎಂದಿದ್ದಾರೆ ಮೋದಿ.

ಗುಜರಾತ್‌ನಲ್ಲಿ 4 ಸರಕಾರಿ ಯೋಜನೆಗಳನ್ನು ಶೇ.100 ವ್ಯಾಪ್ತಿಗೆ ತಲುಪಿಸಿರುವ ಹಿನ್ನೆಲೆ “ಉತ್ಕರ್ಷ್‌ ಸಮಾರೋಹ’ ಕಾರ್ಯಕ್ರಮ ನಡೆಸಲಾಗಿದ್ದು, ಪ್ರಧಾನಿ ಮೋದಿ ಅವರು ಅದರಲ್ಲಿ ವರ್ಚುವಲ್‌ ಆಗಿ ಭಾಗವಹಿಸಿ ಮಾತನಾಡಿದ್ದಾರೆ. ಸರಕಾರದ ಯೋಜನೆಗಳಲ್ಲಿ ಹಲವು ಕೇವಲ ಕಾಗದದಲ್ಲಿ ಉಳಿಯು ತ್ತಿದೆ ಅಥವಾ ಅರ್ಹರಲ್ಲದವರು ಅದರ ಪ್ರಯೋಜನ ಪಡೆಯುತ್ತಿ ದ್ದಾರೆ. ಆದರೆ ಯೋಜನೆಗಳು ಶೇ. 100 ವ್ಯಾಪ್ತಿಗೆ ಸಂಪೂರ್ಣವಾಗಿ ಜಾರಿಗೆ ಬಂದಾಗ ತಾರತಮ್ಯ ಮತ್ತು ತುಷ್ಟೀಕರಣದ ರಾಜಕೀಯ ಕೊನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು